ಮುಂಬಯಿ, ಆ.14: ಕನ್ನಡ ಸಂಘ ಸಾಂತಾಕ್ರೂಜ್ (ರಿ). ಇದರ 61ನೇ ವಾರ್ಷಿಕ ಮಹಾಸಭೆ ಮತ್ತು ವಾರ್ಷಿಕ ವಿದ್ಯಾಥಿರ್ü ವೇತನ ಕಾರ್ಯಕ್ರಮವು ಇದೇ ಆ.18ನೇ ಶನಿವಾರ ಸಂಜೆ 3:00 ಗಂಟೆಗೆ ಸಾಂತಾಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದ ಸಭಾಗೃಹದಲ್ಲಿ ಸಂಘದ ಅಧ್ಯಕ್ಷ ಎಲ್.ವಿ ಅಮೀನ್ ಅಧ್ಯಕ್ಷತೆಯಲ್ಲಿ ಜರುಗಲಿದೆ.
L V Amin. Sujata R.Shetty
ಬರುವ ಡಿಸೆಂಬರ್.16ನೇ ಆದಿತ್ಯವಾರ ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಆಯೋಜಿಸಲಾದ ಸಂಘದ ವಜ್ರವಮೋತ್ಸವ ಸಂಭ್ರÀ್ರಮದ ಮನವಿಪತ್ರ ಇದೇ ವೇಳೆ ಬಿಡುಗಡೆ ಗೊಳಿಸಲಾಗುವುದು. ತದನಂತರ ಸಂಘವು ದಾನಿಗಳ ಪ್ರಾಯೋಜಕತ್ವದಲ್ಲಿ ವಾರ್ಷಿಕವಾಗಿ ನೀಡುವ 2018ನೇ ಸಾಲಿನ ವಿದ್ಯಾಥಿರ್ü ವೇತನ ವಿತರಣೆ, ದತ್ತು ಸ್ವೀಕೃತ ವಿದ್ಯಾಥಿರ್üಗಳ ವಿದ್ಯಾಸಹಾಯ ನಿಧಿಯನ್ನು ಸಂಜೆ 4:00 ಗಂಟೆಗೆ ದಾನಿಗಳ ಹಸ್ತದಿಂದಲೇ ಪ್ರದಾನಿಸಲಾಗುವುದು ಎಂದು ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ಬನ್ನಂಜೆ ರವೀಂದ್ರ ಅವಿೂನ್ ತಿಳಿಸಿದ್ದಾರೆ.
ಆ ನಿಮಿತ್ತ ಫಲಾನುಭವಿ ವಿದ್ಯಾಥಿರ್üಗಳು ತಮ್ಮ ಪೆÇೀಷಕರನ್ನು ಒಳಗೊಂಡು ಕ್ಲಪ್ತ ಸಮಯಕ್ಕೆ ಆಗಮಿಸಬೇಕು ಮತ್ತು ಸಂಘದ ಸದಸ್ಯರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಭೆಯ ಯಶಸ್ವಿಗೆ ಸಹಕರಿಸುವಂತೆ ಸಂಘದ ಗೌ| ಪ್ರ| ಕಾರ್ಯದರ್ಶಿ ಸುಜತಾ ಆರ್.ಶೆಟ್ಟಿ ಮತ್ತು ಶಿಕ್ಷಣ ಸಮಿತಿ ಕಾರ್ಯದರ್ಶಿ ಶಕೀಲಾ ಪಿ.ಶೆಟ್ಟಿ ಹಾಗೂ ಸರ್ವ ಪದಾಧಿಕಾರಿಗಳು ಈ ಮೂಲಕ ವಿನಂತಿಸಿದ್ದಾರೆ.