Friday 26th, April 2024
canara news

ಪನ್ವೇಲ್ ಕರ್ಜತ್ ಸಮೀಪ ರೈಲು ಅಪಘಾತಕ್ಕೆ ಹರಿಪ್ರಸಾದ್ ರೈ ಕಡಬ ಮೃತ್ಯುವಶ

Published On : 18 Oct 2018   |  Reported By : Rons Bantwal


ಮುಂಬಯಿ, ಅ.17: ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಮುಂಡ್ರಾಡಿ ನಿವಾಸಿ ಹರಿಪ್ರಸಾದ್ ರೈ (51.) ಇಂದಿಲ್ಲಿ ಮಹಾರಾಷ್ಟ್ರದ ರಾಯಗಾಢ ಇಲ್ಲಿನ ಕರ್ಜತ್ ಮತ್ತು ಕಲಾಪುರ ರೈಲ್ವೇ ಮಾರ್ಗದ ಮಧ್ಯೆ ಚಲಿಸುತ್ತಿರುವ ರೈಲಿನಿಂದ ಬಿದ್ದು ಕಳೆದ ಮಂಗಳವಾರ ಮೃತಪಟ್ಟಿದ್ದಾರೆ ಎಂದು ರೈಲ್ವೇ ಮೂಲವು ತಿಳಿಸಿದೆ. ವೃತ್ತಿಯಿಂದ ಇಂಜಿನಿಯರ್ ಅವರು ಮುಂಬಯಿಯಲ್ಲಿ ಇಂಜಿನಿಯರ್ ಆಗಿ ವೃತ್ತಿ ನಿರತ ಹರಿಪ್ರಸಾದ್ ಮಂಗಳೂರು ಪ್ರಯಾಣಿಸಲು ಪನ್ವೇಲ್‍ನಿಂದ ಮತ್ಸ ್ಯಗಂಧ ಎಕ್ಸ್‍ಪ್ರೆಸ್ ರೈಲು ಹಿಡಿಯಲು ಬರುತ್ತಿರುವಾಗ ಈ ಘಟನೆ ಸಂಭವಿಸಿರುವುದಾಗಿ ಕುಟುಂಬ ಮೂಲಗಳಿಂದ ತಿಳಿದು ಬಂದಿದೆ.

ಹರಿಪ್ರಸಾದ್ ಅವರು ದಸರಾ ನಿಮಿತ್ತ ತಾಯ್ನಾಡಿಗೆ ಹೊರಟಿದ್ದು ಆ ಮುನ್ನ ಮಹಾನಗರದ ಕೊಲಾಬಾದಲ್ಲಿ ವಾಸಿಸುತ್ತಿದ್ದ ತನ್ನ ಅಣ್ಣ ಶ್ರೀನಿವಾಸ್ ರೈ ಅವರೊಂದಿಗೆ ಮಾತನಾಡಿ ಊರಿಗೆ ಹೋಗಿ ಬರುವುದಾಗಿ ತಿಳಿಸಿದ್ದರು ಎನ್ನಲಾಗಿದೆ.

ರೈಲ್ವೇ ಪೆÇೀಲಿಸರು ಮೃಹದೇಹವನ್ನು ಕರ್ಜತ್ ಅಲ್ಲಿನ ಸರಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದು ಮಹಾನಗರ ಪ್ರವಾಸದಲ್ಲಿದ್ದ ಹರಿಪ್ರಸಾದ್ ಸಂಬಂಧಿಯೂ ಮಂಗಳೂರು ಸಂಸದ ನಳೀನ್‍ಕುಮಾರ್ ಕಟೀಲ್ ಹಾಗೂ ಬಂಟ್ವಾಳ ವಿಧಾನಸಭಾ ಶಾಸಕ ಉಳೆಪಾಡಿಗುತ್ತು ರಾಜೇಶ್ ನಾಯ್ಕ್ ಆಸ್ಪತ್ರೆಗೆ ಭೇಟಿ ನೀಡಿ ಪಾರ್ಥೀವ ಶರೀರದ ಮರಣೋತ್ತರ ಪರೀಕ್ಷೆ ಶೀಘ್ರವೇ ಪೂರೈಸಿ ಮೃತದೇಹವನ್ನು ತವರೂರಿಗೆ ರವಾನಿಸುವಲ್ಲಿ ಶ್ರಮಿಸುತ್ತಿರುವುದಾಗಿ ತಿಳಿದುಬಂದಿದೆ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here