ಮುಂಬಯಿ, ಅ.29: ಮಹಾನಗರದಲ್ಲಿನ ಸಮುದಾಯದ ಪ್ರತಿಷ್ಠಿತ ಸಂಸ್ಥೆಯಲ್ಲೊಂದಾದ ಗಾಣಿಗ ಸಮಾಜ ಮುಂಬಯಿ ಇದರ ವಾರ್ಷಿಕ-2018ರ ಕ್ರೀಡಾಕೂಟವು ಇದೇ ನ.03ನೇ ಆದಿತ್ಯವಾರ ಅಂಧೇರಿ ಪೂರ್ವದ ಚಕಾಲ ಇಲ್ಲಿನ ಹೋಲಿ ಫ್ಯಾಮಿಲಿ ಹೈಸ್ಕೂಲು ಮೈದಾನದಲ್ಲಿ ಬೆಳಿಗ್ಗೆ 8:00 ಗಂಟೆಯಿಂದ ಸಂಜೆ ತನಕ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಅಧ್ಯಕ್ಷ ಕುತ್ಪಾಡಿ ರಾಮಚಂದ್ರ ಎಂ.ಗಾಣಿಗ ತಿಳಿಸಿದ್ದಾರೆ.
Kutpady Ramachandra Ganiga. Divey Rana Cricketer
Chandrashekhar R.Ganiga Tara N.Bhatkal
Ganesh R.Kutpady.
ಸಮುದಾಯದ ಒಗ್ಗೂಡುವಿಕೆ ಮತ್ತು ಸಾಂಘಿಕತೆ ಉದ್ದೇಶವನ್ನಾಗಿಸಿ ಕ್ರೀಡಾ ಸ್ಪರ್ಧೆ ಆಯೋಜಿಸಲಾಗಿದ್ದು, ಅಂದು ಬೆಳಿಗ್ಗೆ ಮಾಜಿ ರಣಜಿ ಕ್ರಿಕೇಟ್ ಆಟಗಾರ, ಫಿಟ್ನೆಸ್ ತರಬೇತುದಾರ ದಿವೇ ರಾಣ ಕ್ರೀಡಾಕೂಟ ಉದ್ಘಾಟಿಸಲಿದ್ದಾರೆ. ಕ್ರೀಡಾ ಸ್ಪರ್ಧೆಯಲ್ಲಿ ಮಕ್ಕಳಿಗಾಗಿ ವಿನೋದಾಟಗಳು, ಚಿತ್ರ ಹಾಗೂ ಬಣ್ಣಗಾರಿಕಾ ಸ್ಪರ್ಧೆ, ಓಟ ಸ್ಪರ್ಧೆ, ಲೆಮನ್ ಎಂಡ್ ಸ್ಪೂನ್, ಮ್ಯೂಸಿಕಲ್ ಚೇಯರ್ ಮತ್ತಿತರ ಸ್ಪರ್ಧೆಗಳು, ಮಹಿಳೆಯರು ಮತ್ತು ಪುರುಷÀರಿಗೆ ವಾಲಿಬಾಲ್, ಫುಟ್ಬಾಲ್, ತ್ರೋಬಾಲ್, ಕ್ರಿಕೇಟ್ ಪಂದ್ಯಾಟ, ಶಾಟ್ಫುಟ್, ಲಾಂಗ್ಜಂಪ್, ಹಗ್ಗಜಗ್ಗಾಟ, ಕೇರಂ, ಮ್ಯೂಸಿಕಲ್ ಚೇಯರ್ ಇತ್ಯಾದಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಆ ನಿಮಿತ್ತ ಮಹಾನಗರ ಮುಂಬಯಿಯಲ್ಲಿನ ಸಮಸ್ತ ಗಾಣಿಗ ಸಮಾಜದ ಎಲ್ಲಾ ಬಂಧುಗಳು ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಸಕ್ರೀಯರಾಗಿ ಪಾಲ್ಗೊಳ್ಳುವಂತೆ ಗೌರವಾಧ್ಯಕ್ಷ ಜಗನ್ನಾಥ ಎಂ.ಗಾಣಿಗ ಮತ್ತು ಜೊತೆ ಕಾರ್ಯದರ್ಶಿ ಬಿ.ಜಗದೀಶ್ ಗಾಣಿಗ ತಿಳಿಸಿದ್ದಾರೆ.
ಸ್ಪರ್ಧೆಗಳಲ್ಲಿ ಭಾಗವಹಿಸುವ ಕ್ರೀಡಾಸಕ್ತ ಎಲ್ಲಾ ಗಾಣಿಗ ಬಂಧುಗಳು ತಮ್ಮ ಹೆಸರುಗಳನ್ನು ಮುಂಚಿತವಾಗಿ ಸಂಘದ ಪದಾಧಿಕಾರಿಗಳಲ್ಲಿ ನೋಂದಾಯಿಸುವಂತೆ ಸಂಘದ ಗಣೇಶ್ ಆರ್.ಕುತ್ಪಾಡಿ (9892142223), ಭಾಸ್ಕರ್ ಎಂ.ಗಾಣಿಗ (9869799035), ಬಿ.ವಿ ರಾವ್ (9820328894), ಜಗದೀಶ್ ಗಾಣಿಗ (9892026650), 4ಉ ಗೋಪಾಲ ಗಾಣಿಗ (9321173131) ಸಂಪರ್ಕಿಸುವಂತೆ ಕೋರಲಾಗಿದೆ.
ಮುಂಬಯಿ ಮಹಾನಗರ, ಉಪನಗರದಲ್ಲಿನ ಸಮಸ್ತ ಗಾಣಿಗ ಬಾಂಧವರು ಸಕಾಲದಲ್ಲಿ ಕ್ರೀಡೋತ್ಸವದಲ್ಲಿ ಭಾಗವಹಿಸಿ ತಮ್ಮ ಕ್ರೀಡಾ ಪ್ರತಿಭೆಗಳೊಂದಿಗೆ ಸಮಾಜದ ಏಕತೆಯನ್ನೂ ಪ್ರದರ್ಶಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಸಂಘದ ಗೌ| ಪ್ರ| ಕಾರ್ಯದರ್ಶಿ ಚಂದ್ರಶೇಖರ್ ಆರ್.ಗಾಣಿಗ ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.