ಕುಂಜಾರುಗಿರಿ ಪಾಜಕದ ಆನಂದತೀರ್ಥ ವಿದ್ಯಾಲಯದ ವಿದ್ಯಾರ್ಥಿಗಳಿಗೆ "ಪರೀಕ್ಷೆಯನ್ನು ಎದುರಿಸುವುದು ಹೇಗೆ" ಎಂಬ ವಿಷಯದ ಕುರಿತಾದ ಕಾರ್ಯಾಗಾರವನ್ನು ಜೆಸಿಐ ರಾಷ್ಟ್ರೀಯ ತರಬೇತುದಾರ ರಾಜೇಂದ್ರ ಭಟ್ ಇತ್ತೀಚಿಗೆ ನಡೆಸಿಕೊಟ್ಟರು.
ಈ ತರಬೇತಿ ಕಾರ್ಯಕ್ರಮದಲ್ಲಿ ಪರೀಕ್ಷಾ ವಿಧಾನಗಳು , ಸಮಯ ಪರಿಪಾಲನಾ ಸೂತ್ರಗಳು , ನೆನಪಿನ ಶಕ್ತಿಯನ್ನು ವೃದ್ಧಿಸುವ ವಿಧಾನ, ಒತ್ತಡ ನಿರ್ವಹಣೆ , ವೇಳಾಪಟ್ಟಿ ತಯಾರಿ , ವ್ಯಕ್ತಿತ್ವ ಉನ್ನತಿಗೆ ಕೌಶಲಗಳು ಹೀಗೆ ಹಲವು ಆಯಾಮಗಳನ್ನು ಸೂಕ್ಷ್ಮವಾಗಿ ಅವಲೋಕಿಸಲಾಯಿತು . ಪ್ರಾತ್ಯಕ್ಷಿಕೆ ಮತ್ತು ಪ್ರಾಯೋಗಿಕ ಗೇಮ್ಸ್ ಗಳ ಮೂಲಕ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಲಾಯಿತು .
ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲೆ ಗೀತಾ ಎಸ್. ಕೋಟ್ಯಾನ್ , ಆಡಳಿತಾಧಿಕಾರಿ ಗುರುದತ್ ಸೋಮಯಾಜಿ , ಮುಖ್ಯ ವಾರ್ಡನ್ ನಾಗರಾಜ್ ತಲ್ಲಂಜೆ ಮತ್ತು ಶಿಕ್ಷಕರು ಭಾಗವಹಿಸಿದ್ದರು . ಮಲ್ಲಿಕಾ ನಿರೂಪಿಸಿ ವಂದಿಸಿದರು .