ರಾಮರಾಜ ಕ್ಷತ್ರೀಯ ಸೇವಾ ಸಂಘ ಮುಂಬಯಿ `ಕ್ರೀಡಾ ಸಂಭ್ರಮ-2018'
ಮುಂಬಯಿ, ನ.12: ಮಹಾನಗರದಲ್ಲಿನ ಸಮುದಾಯದ ಪ್ರತಿಷ್ಠಿತ ಸಂಸ್ಥೆಯಲ್ಲೊಂದಾದ ರಾಮರಾಜ ಕ್ಷತ್ರೀಯ ಸೇವಾ ಸಂಘ ಮುಂಬಯಿ ತನ್ನ ವಾರ್ಷಿಕ ಕ್ರೀಡೋತ್ಸವ `ಆರ್ಕೆಎಸ್ಎಸ್ ಕ್ರೀಡಾ ಸಂಭ್ರಮ-2018'ನ್ನು ಇದೇ ನ.18ರ ಭಾನುವಾರ ಗುರು ನಾನಕ್ ಖಾಲ್ಸಾ ಕಾಲೇಜ್ ಕ್ರೀಡಾಂಗಣ, ನಾಥಲಾಲ್ ಪರೇಖ್ ಮಾರ್ಗ, ಡೋನ್ಬೊಸ್ಕೊ ಮಾಟುಂಗಾ ಪೂರ್ವ ಇಲ್ಲಿ ಕ್ಷತ್ರೀಯ ಸಂಘದ ಅಧ್ಯಕ್ಷ ರಾಜ್ಕುಮಾರ್ ಕಾರ್ನಾಡ್ ಅಧ್ಯಕ್ಷತೆಯಲ್ಲಿ ಆಯೋಜಿಸಿದೆ ಬೆಳಿಗ್ಗೆ 8:30 ಗಂಟೆಯಿಂದ ಸಂಜೆ 5:30 ಗಂಟೆ ತನಕ ಹಮ್ಮಿಕೊಂಡಿದೆ ಎಂದು ಕ್ಷತ್ರೀಯ ಸಂಘದ ಉಪಾಧ್ಯಕ್ಷ ಎನ್.ರವೀಂದ್ರನಾಥ್ ರಾವ್ ತಿಳಿಸಿದ್ದಾರೆ.
ಸಮುದಾಯದ ಸಾಂಘಿಕತೆ ಮತ್ತು ಕ್ಷಮತೆ ಉದ್ದೇಶವನ್ನಾಗಿಸಿ ವಾರ್ಷಿಕ ಕ್ರೀಡಾ ಸ್ಪರ್ಧೆ ಆಯೋಜಿಸಲಾಗಿದ್ದು, ಏಕದಿನವಾಗಿಸಿ ಹಮ್ಮಿಕೊಳ್ಳಲಾಗಿರುವ `ಆರ್ಕೆಎಸ್ಎಸ್ ಕ್ರೀಡಾ ಸಂಭ್ರಮ-2018'ವನ್ನು ಯೋಗಾ ಮುಖೇನ ಕ್ರೀಡಾ ಸಂಭ್ರಮ ಆರಂಭಗೊಳ್ಳಲಿದ್ದು ಸಂಘದ ಹಿರಿಯ ಧುರೀಣರು ಮತ್ತು ಕ್ರೀಡಾಪ್ರೇಮಿಗಳು ಆಗಮಿಸಿ ಸ್ಪರ್ಧೆಯನ್ನು ಉದ್ಘಾಟಿಸಲಿದ್ದಾರೆ. ಸ್ಪರ್ಧೆಯಲ್ಲಿ ಮಕ್ಕಳಿಂದ ಹಿರಿಯ ನಾಗರಿಕರ ತನಕ ವಿವಿಧ ವಿಭಾಗಳನ್ನಾಗಿಸಿ ಸ್ಪರ್ಧೆ ಆಯೋಜಿಸಲಾಗಿದ್ದು, ವಿನೋದಾಟ, ಗೇಮ್ಸ್ಗಳು, ಪಾಲಕರ ಜೊತೆ ಮಕ್ಕಳ ಓಟ, ಕಪ್ಪೆ ಓಟ, ಕೋಳಿ ಓಟ, ಲಾಂಗ್ಜಂಪ್, ಶಾಟ್ಫುಟ್, ಡಿಸ್ಕ್ ಎಸೆತ, ಬುಕ್ ಬ್ಯಾಲೆನ್ಸ್, ಪೆÇಟಾಟೋ ರೇಸ್, ನಡತೆ, ತ್ರೋಬಾಲ್, ಕ್ರಿಕೇಟ್ ಪಂದ್ಯಾಟ ಇತ್ಯಾದಿ ಸ್ಪರ್ಧೆಗಳನ್ನು ನಡೆಸಲಾಗುವುದು.
ಆ ನಿಮಿತ್ತ ಮಹಾನಗರ ಮುಂಬಯಿಯಲ್ಲಿನ ಸಮಸ್ತ ರಾಮರಾಜ ಕ್ಷತ್ರೀಯ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಸಕ್ರೀಯರಾಗಿ ಪಾಲ್ಗೊಳ್ಳುವಂತೆ ಹಾಗೂ ಸ್ಪರ್ಧೆಗಳಲ್ಲಿ ಭಾಗವಹಿಸುವ ಕ್ರೀಡಾಸಕ್ತ ರಾಮರಾಜ ಕ್ಷತ್ರೀಯ ಬಂಧುಗಳು ತಮ್ಮ ಹೆಸರುಗಳನ್ನು ಮುಂಚಿತವಾಗಿ ಸಂಘದ ಪದಾಧಿಕಾರಿಗಳಲ್ಲಿ ನೋಂದಾಯಿಸುವಂತೆ ಕೋರಲಾಗಿದೆ.
ಸಂಘದ ಕೋಶಾಧಿಕಾರಿ ನವಿನಾ ಎಸ್.ರಾವ್, ಜೊತೆ ಕಾರ್ಯದರ್ಶಿಗಳಾದ ರಿತೇಶ್ ಆರ್.ರಾವ್ ಮತ್ತು ನಿತ್ಯಾನಂದ ಸಿ.ರಾವ್, ಜೊತೆ ಕೋಶಾಧಿಕಾರಿ ರೂಪೇಶ್ ಆರ್.ರಾವ್ ಸೇರಿದಂತೆ ಮಹಿಳಾ ವಿಭಾಗ, ಯುವ ವಿಭಾಗದ ಪದಾಧಿಕಾರಿಗಳು ಮತ್ತು ಸಂಘದ ಸರ್ವ ಸದಸ್ಯರ ಪರವಾಗಿ ಗೌ| ಪ್ರ| ಕಾರ್ಯದರ್ಶಿ ಕೇದರ್ನಾಥ ಆರ್.ಬೋಳಾರ್ ಈ ಮೂಲಕ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.