ಮುಂಬಯಿ, ಮೇ.30: ಶತಾಯುಷಿ ಕಮಲ ಅಮು ಸುವರ್ಣ (102.) ಇಂದಿಲ್ಲಿ ಗುರುವಾರ ಸಂಜೆ ವಯೋವೃದ್ಧ ಸಹಜ ಅನಾರೋಗ್ಯದಿಂದ ನಗರದ ಚೆಂಬೂರು ಘಾಟ್ಲಾ ವಿಲೇಜ್ ಸನಿಹದ ಸ್ವಗೃದಲ್ಲಿ ನಿಧನ ಹೊಂದಿರುವರು.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಕುದ್ರೋಳಿ ಮೂಲದವರು. ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನ ಇಲ್ಲಿನ ದೇವರ ಸೇವೆಯಲ್ಲಿ ತಮ್ಮನ್ನು ತೊಡಗಿಸಿ ಕೊಂಡು ಓರ್ವ ಹಿರಿಯ ಕಾರ್ಯಕರ್ತೆಯಾಗಿ ಚಿರಪರಿಚಿತರಾಗಿದ್ದರು.
ಮೃತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯಂದಿರು, ಚಾರ್ಕೋಪ್ ಕನ್ನಡಿಗರ ಬಳಗದ ಅಧ್ಯಕ್ಷ ಭಾಸ್ಕರ ಸರಪಾಡಿ (ಅಳಿಯ) ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ.