ಮುಂಬಯಿ, ಸೆ.08: ಮುಂಬಯಿ ಅಲ್ಲಿನ ಹಿರಿಯ ಶಿಕ್ಷಕ, ಸಾಹಿತಿ ಡಾ| ಜಿ.ಡಿ ಜೋಶಿ ಅವರ ಕೃತಿ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಗಿದೆ.
ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಇಂಜಿನೀಯರಿಂಗ್ ಪ್ರತಿಷ್ಠಾನ ಬೆಂಗಳೂರು ಆಯೋಜಿಸಿದ್ದ ಸಾಹಿತ್ಯ ಸ್ಪರ್ಧೆಯಲ್ಲಿ ಡಾ| ಜಿ.ಡಿ ಜೋಶಿ ಅವರ ಸಮಗ್ರ ಕನ್ನಡ ಕಣ್ಮಣಿಗಳು ಕೃತಿ ಆಯ್ಕೆಯಾಗಿದ್ದು, ಬಹುಮಾನವಾಗಿ ರೂಪಾಯಿ 3,000/- ನಗದು, ಪ್ರಶಸ್ತಿಪತ್ರ ಹಾಗೂ ಸ್ಮರಣಿಕೆಯನ್ನೀಡಿ ಗೌರವಿಸಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಇದೇ ಸೆ.25ನೇ ಬುಧವಾರ ಸಂಜೆ ಬೆಂಗಳೂರು ಅಲ್ಲಿನ ಬೆಂಗಳೂರು ಜೆ.ಸಿ ರಸ್ತೆ ಇಲ್ಲಿನ ಕನ್ನಡ ಭವನನದ ನಯನ ಸಭಾಗೃಹದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಗಣ್ಯಾತಿಗಣ್ಯರ ಉಪಸ್ಥಿತಿಯಲ್ಲಿ ಈ ಪ್ರಶಸ್ತಿ ಪ್ರದಾನಿಸಲಾಗುವುದು ಎಂದು ಅಧ್ಯಕ್ಷ ರಮೇಶ್ ಸುರ್ವೆ ತಿಳಿಸಿದ್ದಾರೆ.