ಮುಂಬಯಿ, ಸೆ.08: ದಹಿಸರ್ ಪೂರ್ವದ ಸುದೀಂದ್ರ ನಗರದಲ್ಲಿನ ಕಾಶೀ ಮಠದÀಲ್ಲಿ ಲಕ್ಷ್ಮೀ ನಾರಾಯಣ ಹೃದಯ ಹವನ ಇತ್ತೀಚಿಗೆ ನೇರವೇರಿಸಲ್ಪಟ್ಟಿತು. ವೇದಮೂರ್ತಿ ಹರಿಖಂಡಿಗೆ ಉಲ್ಲಾಸ್ ಭಟ್ ತನ್ನ ಪೌರೋಹಿತ್ಯದಲ್ಲಿ ಶಾಸ್ತ್ರೋಕ್ತವಾಗಿ ಲಕ್ಷ್ಮೀನಾರಾಯಣ ಹೃದಯ ಹವನ ನೆರವೇರಿಸಿ ಉಪಸ್ಥಿತ ಸದ್ಭಕ್ತರನ್ನು ಹರಸಿದರು.
ಕಾಶೀ ಮಠ ಸಂಸ್ಥಾನದ ದೈವಕ್ಯ ಪರಮಪೂಜ್ಯ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಹಾಗೂ ಮಠಾಧಿಪತಿ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರ ಅನುಗ್ರಹಗಳೊಂದಿಗೆ ವೇದಮೂರ್ತಿ ವಾಲ್ಕೇಶ್ವರ ಲಕ್ಷ್ಮೀನಾರಾಯಣ ಭಟ್ ಮತ್ತಿತರ ವೈಧಿಕರು ಇತರ ಪೂಜಾಧಿಗಳನ್ನು ನಡೆಸಿದರು.
ಸುನೀಲ್ ವಾಸುದೇವ ಶೆಣೈ ಹಾಗೂ ಮೋಹನದಾಸ್ ಪಿ.ಮಲ್ಯ ಇವರ ಮುಂದಾಳತ್ವದಲ್ಲಿ ಪುಣ್ಯಾಧಿ ಧಾರ್ಮಿಕ ಕಾರ್ಯಕ್ರಮದಲ್ಲಿ ಶೋಭಾ ವಿನಾಯಕ ಕುಲಕರ್ಣಿ, ಸುಗುಣಾ ಕಮಲಾಕ್ಷ ಕಾಮತ್, ಸಾಣೂರು ಮನೋಹರ್ ವಿ.ಕಾಮತ್, ಮಧುಸೂದÀನ್ ಪೈ, ಹಾಗೂ ಜಿಎಸ್ಬಿ ಸಭಾ ದಹಿಸರ್ ಬೊರಿವಿಲಿ, ಸಾರಸ್ವತ್ ಕಲ್ಚರಲ್ ಎಂಡ್ ರಿಕ್ರಿಯೇಶನ್ ಸೆಂಟರ್ನ ಪದಾಧಿಕಾರಿಗಳು ಸೇರಿದಂತೆ ಅನೇಕ ಗಣ್ಯರು, ನೂರಾರು ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು. ದಹಿಸರ್ ಬೊರಿವಿಲಿ ಭಜನಾ ಮಂಡಳಿ ಇವರಿಂದÀ ಭಜನಾ ಕಾರ್ಯಕ್ರಮ ನೆರವೇರಿಸಿತು.