ಮುಂಬಯಿ, ಜ. 29: ಇದೇ ಬರುವ ಎಪ್ರಿಲ್ ಮೊದಲವಾರದಲ್ಲಿ ಗಲ್ಫ್ನ ಒಮಾನ್ ರಾಷ್ಟ್ರದ ಮಸ್ಕತ್ನಲ್ಲಿ ನಡೆಸಲಾಗುವ 16ನೇ ವಿಶ್ವ ಕನ್ನಡ ಸಮ್ಮೇಳನದ ಬಗ್ಗೆ ಒಮಾನ್ ಕನ್ಪರೆನ್ಸ್ ಸಂಘಟನೆಯ ಅಧ್ಯಕ್ಷ ಡಾ| ಸತೀಶ್ ನಂಬಿಯಾರ್ ಇಂದಿಲ್ಲಿ ಬುಧವಾರ ಬೆಂಗಳೂರು ಇಲ್ಲಿನ ಖಾಸಾಗಿ ಹೊಟೇಲ್ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿಯನ್ನಿತ್ತರು.
ಪತ್ರಿಕಾಗೋಷ್ಠಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ಸಮಿತಿ ಅಧ್ಯಕ್ಷ ಕೆ.ಪಿ ಮಂಜುನಾಥ್ ಸಾಗರ್, ಗೌರವಾಧ್ಯಕ್ಷ ಡಾ| ಎಂ.ಸುಬ್ರಮಣಿ, ಉಪಾಧ್ಯಕ್ಷ ಎಸ್.ಡಿ.ಟಿ ಪ್ರಸಾದ್, ಉಪಾಧ್ಯಕ್ಷ ಪೆÇ್ರ.ಎಂ.ಬಿ ಕುದರಿ ಮತ್ತು ಗಾಯಕ ಗೊ.ನ ಸ್ವಾಮಿ ಉಪಸ್ಥಿತರಿದ್ದರು.