ಮುಂಬಯಿ, ಎ.22: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಗುರು ನಾರಾಯಣ ರಾತ್ರಿ ಶಾಲಾ ಹಳೆ ವಿದ್ಯಾಥಿರ್ü ಸಂಘದ ಮಾಜಿ ಕಾರ್ಯಾಧ್ಯಕ್ಷ ರಘುರಾಮ ಎಸ್.ಕೋಟ್ಯಾನ್ (72.) ಹೃದಯಾಘಾತದಿಂದ (ಎ.15) ಬೋರಿವಲಿ ಇಲ್ಲಿನ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಇಲ್ಲಿನ ಕೆಂಚನಕೆರೆ ಮೂಲತಃ ರಘುರಾಮ ಇವರು ಸಮಾಜ ಸೇವಾಕರ್ತರಾಗಿದ್ದು ಬಿಲ್ಲವರ ಅಸೋಸಿಯೇಶನ್ ಇದರ ಬೊರಿವಲಿ ಶಾಖೆಯಲ್ಲಿ ಕ್ರಿಯಾಶೀಲರಾಗಿ ತೊಡಗಿಸಿ ಕೊಂಡಿದ್ದರು.
ಮೃತರು, ಪತ್ನಿ ಅಮಿತಾ ಆರ್.ಕೋಟ್ಯಾನ್ ಇಬ್ಬರು ಪುತ್ರಿಯರು, ಓರ್ವ ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.