ಮುಂಬಯಿ, ಎ.30: ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮಾವತೀ ಗರೋಡಿ ಸೇವಾ ಟ್ರಸ್ಟ್ ಮುಂಬಯಿ (ರಿ.) ಇದರ ಸಕ್ರೀಯ ಸದಸ್ಯ ಹಾಗೂ ಭಾರತ್ ಬ್ಯಾಂಕ್ನ ಉದ್ಯೋಗಿ ವಿಜಯ್ ಪಾಲನ್ ಇವರ ಮಾತೃಶ್ರೀ ರಜನಿ ವಿ.ಅವಿೂನ್ (76.) ಇಂದಿಲ್ಲಿ ಗುರುವಾರ (ಎ.30) ಉಡುಪಿ ಉದ್ಯಾವರ ಇಲ್ಲಿನ ಸ್ವಗೃಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಮೃತರಿಗೆ ಭಾರತ್ ಬ್ಯಾಂಕ್ನ ನಿರ್ದೇಶಕ ಮಂಡಳಿ, ನೌಕರ ವೃಂದ, ಧೂಮಾವತೀ ಗರೋಡಿ ಸೇವಾ ಟ್ರಸ್ಟ್ನ ಅಧ್ಯಕ್ಷರು, ಕಾರ್ಯಕಾರಿ ಸಮಿತಿ, ಟ್ರಸ್ಟಿಗಳು ಮತ್ತು ಸಲಹಾಗಾರರು ಸಂತಾಪ ಸೂಚಿಸಿದ್ದಾರೆ.