ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರ ಮಹತ್ವಾಕಾಂಕ್ಷೆಯ ಯೋಜನೆ 'ಆರೋಗ್ಯ ಅಭಯಹಸ್ತ' ಕಾರ್ಯಕ್ರಮದ ಯೋಜನೆಗೆ ಪೂರಕವಾಗಿ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವರಾದ ಶ್ರೀ ಕೆ ಅಭಯಚಂದ್ರ ರವರ ಮಾರ್ಗದರ್ಶನ ಹಾಗೂ ಲೋಕಸಭಾ ಅಭ್ಯರ್ಥಿ ಶ್ರೀ ಮಿಥುನ ರೈ ಹಾಗೂ ಬ್ಲಾಕ್ ಅಧ್ಯಕ್ಷರಾದ ಶ್ರೀ ಧನಂಜಯ ಮಟ್ಟು ರವರ ಸಲಹೆಯಂತೆ, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಸಮಿತಿ ವ್ಯಾಪ್ತಿಯ ಹಳೆಯಂಗಡಿ ಗ್ರಾಮ ಪಂಚಾಯತ್ ನ ಇಂದಿರಾನಗರ ಪರಿಸರದಲ್ಲಿ ಕೆಪಿಸಿಸಿ ಸದಸ್ಯರಾದ 'ಶ್ರೀ ವಸಂತ ಬರ್ನಾಡ್' ರವರು ಚಾಲನೆ ನೀಡಿದರು.
ಕಾಂಗ್ರೆಸ್ ಕೊರೋನೋ ವಾರಿಯರ್ಸ್ ಗಳು ವ್ಯಾಪ್ತಿಯ ಪ್ರತಿ ಮನೆಗಳಿಗೆ ಭೇಟಿ ನೀಡಿ ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಿ ಸಂಗ್ರಹಿಸಿದ ವರದಿಯನ್ನು ಸ್ಥಳೀಯ ಆರೋಗ್ಯ ಕೇಂದ್ರದ ಅಧಿಕಾರಿಗಳಿಗೆ ನೀಡಿ ಅಗತ್ಯ ಕ್ರಮ ಕೈಗೊಳ್ಳುವ ಕೆಲಸದಲ್ಲಿ ತೊಡಗಿಕೊಂಡರು.
ಕಾಂಗ್ರೆಸ್ ಕೊರೋನೋ ವಾರಿಯರ್ಸ್ ಟೀಮಿನೊಂದಿಗೆ ಪಂಚಾಯತ್ ಮಾಜಿ ಅಧ್ಯಕ್ಷ 'ಶ್ರೀಮತಿ ಜಲಜ ಪಾಣರ, ಮಾಜಿ ಉಪಾಧ್ಯಕ್ಷೆ 'ಶ್ರೀಮತಿ ಪದ್ಮಾವತ್ ಶೆಟ್ಟಿ, ಮಾಜಿ ಪಂಚಾಯತ್ ಸದಸ್ಯ ಅಬ್ದುಲ್ ಅಜೀಜ್, ನಾಯಕರಾದ ಹುಸೇನಬ್ಬ ಬೊಳ್ಳೂರು ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕೆಪಿಸಿಸಿ ಸದಸ್ಯರಾದ 'ಶ್ರೀ ವಸಂತ ಬರ್ನಾಡ್ ಮಾತನಾಡಿ..ಈಗಾಗಲೇ ಈ ಪರಿಸರದಲ್ಲಿನ ಮುನ್ನೂರ ಐವತ್ತಕ್ಕೂ ಹೆಚ್ಚು ಮನೆಗಳನ್ನು ಸಂಪರ್ಕಿಸಿ ಆರೋಗ್ಯ ತಪಾಸಣೆ ನಡೆಸಿ ವರದಿ ಸಂಗ್ರಹಿಸಿದ್ದೇವೆ ಮುಂದಿನ ದಿನಗಳಲ್ಲಿ ಇನ್ನಷ್ಟು ಮನೆಗಳಿಗೆ ಬೇಟಿಕೊಡುವ ಗುರಿ ಹೊಂದಿದ್ದೇವೆ ಎಂದರು.