ಮುಂಬಯಿ (ಆರ್ ಬಿ ಐ), ಸೆ.01: ಗುಜರಾತ್ ಅಲ್ಲಿನ ಶ್ರೇಷ್ಠ ಲೇಖಕ, ಬರಹಗಾರ, ಪತ್ರಕರ್ತ ಸಂಘಟಕ, ತುಳು ಕನ್ನಡ, ಗುಜರಾತಿ ಭಾಷಾ ಹಿತಚಿಂತಕ, ಎಸ್ಕೆ ಹಳೆಯಂಗಡಿ (ಎಸ್.ಕೆ ಸಾಲಿಯಾನ್ 84.) ಇಂದಿಲ್ಲಿ ಮಂಗಳವಾರ ಮುಂಜಾನೆ ವೃದ್ಧಾಪ್ಯ ಸಹಜತೆಯಿಂದ ಬರೋಡಾ ಇಲ್ಲಿನ ಸ್ವನಿವಾಸದಲ್ಲಿ ನಿಧನರಾದರು.
ಗುಜರಾತ್ ಅಲ್ಲಿನ ಅನೇಕ ಸಂಘಸಂಸ್ಥೆಗಳ ಆಧಾರ ಸ್ತಂಭ, ತುಳು ಕನ್ನಡಿಗರ ಆಪ್ತಬಂಧುವಾಗಿ ಮಹಾನ್ ವ್ಯಕ್ತಿತ್ವ ರೂಪಿಸಿದ ಹಿರಿಯ ಚೇತನ ಆಗಿದ್ದರು. ಎಂದೂ ಗಡಿಯಾರ ನೋಡದೆ ಕನ್ನಡಿಗರ ಏಳಿಗೆ, ಅಭಿವೃದ್ಧಿಗಾಗಿ ನಿಷ್ಕಾಮ ಭಾವನೆಯಿಂದ ಹಗಲಿರುಳು ಶ್ರಮಿಸಿದಎಸ್ ಕೆ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಹಳೆಯಂಗಡಿ ಅಲ್ಲಿನವರು.
ಮೃತರು ಪತ್ನಿ, ಇಬ್ಬರು ಸುಪುತ್ರರು ಹಾಗೂ ಅಪಾರ ಬಂಧುಬಳಗ ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದಿಲ್ಲಿ ಮಧ್ಯಾಹ್ನ ಕರೇಲಿಭಾಗ್ ಇಲ್ಲಿ ನೆರವೇರಿಸಲಾಗಿದ್ದು ಅನೇಕ ಗಣ್ಯರು ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿ ಭಾಷ್ಪಾಂಜಲಿ ಅರ್ಪಿಸಿದರು