ಮುಂಬಯಿ, ಮೇ.17: ಮುಂಬಯಿ ಟಿವಿ ನ್ಯೂಸ್ ಇದರ ನವಿಮುಂಬಯಿ (ಥಾಣೆ) ವಿಭಾಗೀಯ ಬ್ಯೂರೋ ಚೀಫ್, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಪತ್ರಕರ್ತರ ಭವನ ಸಮಿತಿ ಕಾರ್ಯಾಧ್ಯಕ್ಷ ಡಾ| ಶಿವ ಎಂ.ಮೂಡಿಗೆರೆ ಇವರ ಮಾತೃಶಿ ಸೀತಮ್ಮ ಎಸ್.ಪಿ (76.) ಇವರು ತೀವ್ರ ಹೃದಯಾಘಾತದಿಂದ ಇಂದಿಲ್ಲಿ ಅಪರಾಹ್ನ ಚಿಕ್ಕಮಂಗಳೂರು ಮೂಡಿಗೆರೆ ಇಲ್ಲಿನ ವಿದ್ಯಾನಗರದಲ್ಲಿನ ಸ್ವಗೃಹ ಮಾತೃಶ್ರೀ ನಿವಾಸದಲ್ಲಿ ವಿಧಿವಶರಾದರು.
ಕಾಫಿ ಬೆಳೆಗಾರ ಮೋಟಣ್ಣ ಮೂಡಿಗೆರೆ (ಸ್ವರ್ಗೀಯರು) ಇವರ ಧರ್ಮಪತ್ನಿ ಆಗಿದ್ದ ಮೃತರು ಉದಯ ಮೂಡಿಗೆರೆ ಮತ್ತು ಶಿವ ಮೂಡಿಗೆರೆ ಇಬ್ಬರು ಸುಪುತ್ರರು, ಸೊಸೆಯಂದಿರು, ಮೂವರು ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಸೀತಮ್ಮ ಎಸ್.ಪಿ ಅವರ ಅಕಾಲಿಕ ನಿಧನಕ್ಕೆ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಸಂತಾಪ ವ್ಯಕ್ತ ಪಡಿಸಿ ಶ್ರದ್ಧಾಂಜಲಿ ಕೋರಿದ್ದಾರೆ.