ಸುಧೀರ್ ಎಸ್.ಹಟ್ಟಿಯಂಗಡಿ ನಿಧನ
ಮುಂಬಯಿ (ಆರ್ಬಿಐ), ಮೇ.19: ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಇದರ ಮುಖ್ಯ ಪ್ರಬಂಧಕ (ಉಡುಪಿ ಶಾಖೆ) ಸುಧೀರ್ ಎಸ್.ಹಟ್ಟಿಯಂಗಡಿ (56.) ಇಂದಿಲ್ಲಿ ಬುಧವಾರ ಮಂಗಳೂರುನ ಖಾಸಾಗಿ ಆಸ್ಪತ್ರೆಯಲ್ಲಿ ನಿಧನರಾದರು. ಅಲ್ಪಾವಧಿಯ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಇವರು ಇತ್ತೀಚೆಗೆ ಕೋವಿಡ್ಗೆ ತುತ್ತಾಗಿದ್ದರು.
ಭಾರತ್ ಬ್ಯಾಂಕ್ನ ಸುರತ್ಕಲ್, ಉಡುಪಿ, ಮಂಗಳೂರು (ಹಂಪನಕಟ್ಟಾ), ಮೂಡಬಿದ್ರಿ ಮತ್ತಿತರ ಶಾಖೆಗಳಲ್ಲಿ ಸೇವೆ ಸಲ್ಲಿಸಿ ಇದೀಗ ಉಡುಪಿ ಶಾಖೆಯಲ್ಲಿ ಮುಖ್ಯ ಪ್ರಬಂಧಕರಾಗಿ ಸೇವಾ ನಿರತರಾಗಿದ್ದು ಜನಾನುರೆಣಿಸಿದ್ದರು.
ಉಡುಪಿ ಜಿಲ್ಲೆಯ ಕುಂದಾಪುರ ಹಟ್ಟಿಯಂಗಡಿ ಮೂಲತಃ ಇವರು ತಂದೆ, ತಾಯಿ, ಪತ್ನಿ ಒಂದು ಗಂಡು, ಒಂದು ಹೆಣ್ಣು ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ.
ಸುಧೀರ್ ನಿಧನಕ್ಕೆ ಭಾರತ್ ಬ್ಯಾಂಕ್ನ ಕಾರ್ಯಾಧ್ಯಕ್ಷ ಶಿವಾಜಿ ಎಸ್. ಪೂಜಾರಿ, ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲಿಯಾನ್, ಮಾಜಿ ಕಾರ್ಯಾಧ್ಯಕ್ಷ ವಾಸುದೇವ ಆರ್.ಕೋಟ್ಯಾನ್ ಮತ್ತು ನಿರ್ದೇಶಕ ಮಂಡಳಿ, ಬ್ಯಾಂಕ್ನ ಆಡಳಿತ ನಿರ್ದೇಶಕ ವಿದ್ಯಾನಂದ ಎಸ್.ಕರ್ಕೇರಾ, ಬ್ಯಾಂಕ್ನ ಜಂಟಿ ಆಡಳಿತ ನಿರ್ದೇಶಕ ದಿನೇಶ್ ಬಿ.ಸಾಲ್ಯಾನ್, ನಿವೃತ್ತ ಜಿಎಂ ನಿತ್ಯಾನಂದ ಡಿ.ಕೋಟ್ಯಾನ್, ಉದ್ಯಮಿ ಸುರೇಂದ್ರ ಎ.ಪೂಜಾರಿ ಸೇರಿದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿ ಬಾಷ್ಪಾಂಜಲಿ ಕೋರಿದ್ದಾರೆ.