ಮುಂಬಯಿ (ಆರ್ಬಿಐ), ಮೇ.25: ದೇವಾಡಿಗ ಸಂಘ ಮುಂಬಯಿ ಇದರ ಮಾಜಿ ಅಧ್ಯಕ್ಷ, ಹಿರಿಯ ಮುತ್ಸದ್ಧಿ ಎಸ್.ಕೆ ಶ್ರೀಯಾನ್ ಇವರ ಸುಪುತ್ರ ರಾಜನ್ ಎಸ್.ಶ್ರೀಯಾನ್ (54.) ಕಳೆದ ಸೋಮವಾರ ಸಂಜೆ ಬೆಂಗಳೂರುನಲ್ಲಿ ತೀವ್ರ ಹೃದಯಾಘಾತದಿಂದ ವಿಧಿವಶರಾದರು.
ಉಡುಪಿ ಕಿನ್ನಿಮುಲ್ಕಿ ಮೂಲತಃ ರಾಜನ್ ಶ್ರೀಯಾನ್ ಮುಂಬಯಿಯ ಮುಲುಂಡ್ ಅಲ್ಲಿನ ಚೇರಿಸ್ ಸಿಟಿ ಆಫ್ ಜೊಯ್ ಅಪಾರ್ಟ್ಮೆಂಟ್ನಲ್ಲಿ ಕೂಡು ಕುಟುಂಬವಾಗಿ ವಾಸವಾಗಿದ್ದು ಇತ್ತೀಚೆಗೆ ಬೆಂಗಳೂರು ಅಲ್ಲಿನ ಖಾಸಾಗಿ ಸಂಸ್ಥೆಯಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದರು.
ಮೃತರು ಇಬ್ಬಳಿ ಮಕ್ಕಳಲ್ಲಿ ಓರ್ವರಾಗಿದ್ದು ಪತ್ನಿ, ಒಂದು ಗಂಡು, ಒಂದು ಹೆಣ್ಣು (ಮೃತರು ಇಬ್ಬಳಿ ಮಕ್ಕಳಲ್ಲಿ ಓರ್ವರಾಗಿದ್ದು) ಸೇರಿದಂತೆ, ತಂದೆ, ತಾಯಿ, ಎರಡು ಸಹೋದರ, ಎರಡು ಸಹೋದರಿಯರು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ. ಕೋವಿಡ್ ಹಿನ್ನಲೆಯಲ್ಲಿ ಮೃತರ ಅಂತ್ಯಕ್ರಿಯೆಯು ಸೋಮವಾರ ರಾತ್ರಿಯೇ ಬೆಂಗಳೂರುನಲ್ಲಿ ನೆರವೇರಿಸಲಾಯಿತು ಎಂದು ಕುಟುಂಬ ಮೂಲಗಳು ತಿಳಿಸಿದೆ.
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊೈಲಿ, ಶ್ರೀ ಏಕನಾಥೇಶ್ವರಿ ದೇವಸ್ಥಾನ ಟ್ರಸ್ಟ್ ಬಾರ್ಕೂರು ಅಧ್ಯಕ್ಷ ಅಣ್ಣಯ್ಯ ಶೇರಿಗಾರ, ವಿಶ್ವಸ್ಥ ಸದಸ್ಯರಾದ ನಾರಾಯಣ ಎಂ.ದೇವಾಡಿಗ ದುಬಾಯಿ, ಮಾಜಿ ಅಧ್ಯಕ್ಷ ಧರ್ಮಪಾಲ್ ಯು. ದೇವಾಡಿಗ, ದೇವಾಡಿಗ ಸಂಘ ಉಡುಪಿ ಅಧ್ಯಕ್ಷ ರತ್ನಾಕರ ದೇವಾಡಿಗ ಸೇರಿದಂತೆ ಅನೇಕ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ರಾಜನ್ ಅಕಾಲಿಕ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದು ಕುಲದೇವತೆ ಶ್ರೀ ಏಕನಾಥೇಶ್ವರಿ ಇವರ ಅಗಲಿಕಾ ಸಹಿಸುವ ಶಕ್ತಿ ಮೃತರ ಕುಟುಂಬಕ್ಕೆ ದಯಪಾಲಿಸಲಿ ಎಂದು ಸಾಂತ್ವನ ಸೂಚಿಸಿದ್ದಾರೆ.