ಮುಂಬಯಿ (ಆರ್ ಬಿಐ) ಡ.23:ಓಲ್ಡ್ ಡೊಂಬಿವಲಿಯ ಕಾಂಚಿ ಅಪಾರ್ಟ್ಮೆಂಟ್ ನಿವಾಸಿ ಸ್ಕೈ ಮ್ಯಾನ್ ಟೈಲರ್ ವಿಠ್ಠಲ್ ನಾಯ್ಕ್ (63.) ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.
ಮೂಲತಃ ಉಡುಪಿಯ ಕಕ್ಕುಂಜೆ ಕೊಂಬೆ, ಅಂಬಾಗಿಲು ನವರಾದ ಮೃತರು, ಕನ್ನಡ ಮಹಿಳಾ ಸಂಘದ ಸ್ಥಾಪಕ ಅಧ್ಯಕ್ಷರು. ಹಲವಾರು ಧಾರ್ಮಿಕ ಹಾಗೂ ಸಾಮಾಜಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದ ಇವರು ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವ ಆಚರಣಾ ಸಮಿತಿಯನ್ನು ಹುಟ್ಟುಹಾಕಿ ಆ ಮೂಲಕ ಹಲವಾರು ವರ್ಷಗಳಿಂದ ಆರಾಧನಾ ಮಹೋತ್ಸವವನ್ನು ಹಮ್ಮಿಕೊಂಡು ಬರುತ್ತಿದ್ದರು. ಪತ್ನಿ, ಇಬ್ಬರು ಪುತ್ರರು ಓರ್ವ ಪುತ್ರಿಯನ್ನು ಹಾಗೂ ಬಂಧು ಬಾಂಧವರನ್ನು ಅಗಲಿದ್ದಾರೆ