ಮುಂಬಯಿ (ಆರ್ಬಿಐ), ಫೆ.03: ಬಂಟ್ವಾಳ ಪೆರಡಾಲ ನವಜೀವನ ಹೈಸ್ಕೂಲ್ನಲ್ಲಿ ಇಂಜಿನಿಯರ್ ಮಾಸ್ಟರ್ ಎಂದೇ ಪ್ರಸಿದ್ಧರಾಗಿದ್ದ ನಿವೃತ್ತ ಅಧ್ಯಾಪಕ, ಯಕ್ಷಗಾನ ಹವ್ಯಾಸಿ ಕಲಾವಿದ, ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ನೇರಳಕಟ್ಟೆ ನಿವಾಸಿ ಮಾಂಬಾಡಿ ಈಶ್ವರ ಭಟ್ (76.) ಇಂದಿಲ್ಲಿ ಗುರುವಾರ ಬೆಳಗ್ಗೆ ಸ್ವಗೃಹದಲ್ಲಿ ನಿಧನ ಹೊಂದಿದರು.
ಬಹುಮುಖ ಪ್ರತಿಭೆಯ ಅವರು, ಯಕ್ಷಗಾನ, ನಾಟಕ ರಂಗಗಳ ಹಿಮ್ಮೇಳ, ಮುಮ್ಮೇಳಗಳಲ್ಲಿ ತೊಡಗಿಸಿಕೊಂಡಿದ್ದರು. ನವಜೀವನ ಹೈಸ್ಕೂಲಿನಲ್ಲಿ ಸುಮಾರು 36 ವರ್ಷ ಕರ್ತವ್ಯ ಸಲ್ಲಿಸಿ ನಿವೃತ್ತರಾಗಿದ್ದ ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.