ಮುಂಬಯಿ (ಆರ್ಬಿಐ), ಜು.07: ಎಂಟಿಎನ್ಎಲ್ನ ಮಾಜಿ ಉದ್ಯೋಗಿ ತೋನ್ಸೆ ಶ್ರೀ ಬ್ರಹ್ಮಬೈದರ್ಕಳ ಪಂಚ ಧೂಮಾವತಿ ಗರೋಡಿ ಸೇವಾ ಟ್ರಸ್ಟ್ ಮುಂಬಯಿ ಇದರ ಸಕ್ರೀಯ ಸದಸ್ಯ, ಸಲಹೆಗಾರ ಮತ್ತು ಕೊಡುಗೈದಾನಿ, ಗೋಪಾಲ್ ಪಾಲನ್ ಕಲ್ಯಾಣ್ಫುರ (76.) ಇಂದಿಲ್ಲಿ ಗುರುವಾರ ಬೆಳಿಗ್ಗೆ ಮಲಾಡ್ ಪಶ್ಚಿಮದ ಓರ್ಲೆಮ್ ಅಲ್ಲಿನ ಸುಮನ್ ಅಪಾರ್ಟ್ಮೆಂಟ್ನ ಸ್ವನಿವಾಸದಲ್ಲಿ ಹೃದಯಾಘಾತದಿಂದ ನಿಧನನರಾದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ಮೂಡುತೋನ್ಸೆ ನಿವಾಸಿ ಆಗಿದ್ದ ಮೃತರು ಮುಂಬಯಿ ಮತ್ತು ತವರೂರಲ್ಲಿ ಕೊಡುಗೈದಾನಿಯಾಗಿದ್ದು ಸಮಾಜ ಸೇವೆಯಲ್ಲಿ ತೊಡಗಿಸಿದ್ದರು. ಮುಂಬಯಿಯಲ್ಲಿ ಎಂಟಿಎನ್ಎಲ್ ಗೋಪಾಲ್ ಎಂದೇ ಪ್ರಸಿದ್ಧರಾಗಿರುವ ಇವರು ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮಲಾಡ್ ಸ್ಥಳೀಯ ಕಚೇರಿಯಲ್ಲಿ ಗೌರವ ಕಾರ್ಯಾಧ್ಯಕ್ಷ ಆಗಿದ್ದು ಕ್ರಿಯಾಶೀಲರಾಗಿ ತೊಡಗಿಸಿ ಕೊಂಡಿದ್ದರು.
ನಿವಾಸಿ ಆಗಿದ್ದ ಮೃತರು ಪತ್ನಿ, ಇಬ್ಬರು ಸುಪುತ್ರರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.
ಗೋಪಾಲ್ ನಿಧನಕ್ಕೆ ಶ್ರೀ ಬ್ರಹ್ಮಬೈದರ್ಕಳ ಪಂಚ ಧೂಮಾವತಿ ಗರೋಡಿ ಸೇವಾ ಟ್ರಸ್ಟ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಗೌರವ ಪ್ರಧಾನ ಕಾರ್ಯದರ್ಶಿ ತೋನ್ಸೆ ಸಂಜೀವ ಪೂಜಾರಿ ಮತ್ತು ಕಾರ್ಯಕಾರಿ ಸಮಿತಿ, ಸಲಹಾ ಸಮಿತಿ ಹಾಗೂ ಸದಸ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.