ಮಂಗಳೂರು: ಮೂಡಬಿದಿರೆ ಶಿರ್ತಾಡಿಯಿಂದ ಗುರುಪುರ ಕೈಕಂಬದಲ್ಲಿ ಮದುವೆ ಸಮಾರಂಭಕ್ಕೆ ಬೈಕ್ನಲ್ಲಿ ಹೋಗುತ್ತಿದ್ದ ಶಿರ್ತಾಡಿಯ ಸಂತೋಷ್ ರಾಮಣ್ಣ ಪೂಜಾರಿ (25)ಯವರ ಬೈಕ್ಗೆ ಗುರುಪುರ ಕೈಕಂಬದ ಕಡೆಯಿಂದ ಬಂದ ಟಿಪ್ಪರ್ ಗಂಜಿಮಠ ಜಂಕ್ಷನ್ನಲ್ಲಿ ಢಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.ಮೃತ ಸಂತೋಷ್ ಅವರು ಪೈಂಟರ್ಕೆಲಸ ಮಾಡುತ್ತಿದ್ದರು. ಇವರು ಗುರುಪುರ ಕೈಕಂಬದಲ್ಲಿ ನಡೆಯುವ ಮದುವೆ ಸಮಾರಂಭಕ್ಕೆ ಬೈಕ್ನಲ್ಲಿ ತೆರಳುತ್ತಿದ್ದರು. ಗುರುಪುರ ಕೈಕಂಬದಿಂದ ಕಡೆಯಿಂದ ಬಂದ ಮರಳಿನ ಟಿಪ್ಪರ್ ಅವರ ಬೈಕ್ಗೆ ಢಿಕ್ಕಿ ಹೊಡೆದ ಪರಿಣಾಮ ಟಿಪ್ಪರ್ನ ಹಿಂಬದಿಯ ಚಕ್ರ ಅವರ ತಲೆಯ ಮೇಲೆ ಹರಿದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಘಟನೆ ನಡೆದ ತತ್ಕ್ಷಣ ಟಿಪ್ಪರ್ ಲಾರಿ ಚಾಲಕ ಲಾರಿಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಮೂಡಬಿದಿರೆ -ಮಂಗಳೂರು ರಾಷ್ಟ್ರೀಯ ಹೆದ್ದಾರಿ 169ರಲ್ಲಿ ನಡೆದ ಈ ಘಟನೆಯಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.