ಮುಂಬಯಿ, ಜ.05: ಹೊರನಾಡ ಕನ್ನಡಿಗರ ಪ್ರಾತಿನಿಧಿಕ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಸಂಘ ಮುಂಬಯಿ ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಜಿ.ಬುರ್ಡೆ ನಿಧನಕ್ಕೆ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಹಾಗೂ ಗೌರವ ಪ್ರಧಾನ ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ಮತ್ತು ಸರ್ವ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ.
ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಮಾಧ್ಯಮ ಸಲಹಾಗಾರ, ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ಡಾ| ಸುನೀತಾ ಎಂ.ಶೆಟ್ಟಿ, ಪ್ರಸಿದ್ಧ ಸಾಹಿತಿ ಬಾನು ಮುಶ್ತಾಕ್, ಮಾಜಿ ಸಚಿವೆ ಮೋಟಮ್ಮ, ಡಾ| ಸದಾನಂದ ಸುವರ್ಣ, ಸಾ.ದಯಾ, ಜಯ ಸಿ.ಸುವರ್ಣ, ನಿತ್ಯಾನಂದ ಡಿ.ಕೋಟ್ಯಾನ್, ಡಾ| ಈಶ್ವರ್ ಅಲೆವೂರು, ಹರೀಶ್ ಹೆಜ್ಮಾಡಿ, ಮಹೇಶ್ ಕಾರ್ಕಳ, ರಂಗ ಕಲಾವಿದರುಗಳಾದ ಮೋಹನ್ ಮಾರ್ನಾಡ್ ಮತ್ತಿತರ ಗಣ್ಯರು ಸಂತಾಪ ಸೂಚಿಸಿದ್ದಾರೆ.