ಕುಂದಾಪುರ, ಫೆ. 4: ‘ಮಕ್ಕಳು ಮುಗ್ದರು, ಅವರು ಎಳೆವಯಲ್ಲಿರುವಾಗ, ನಾವು ಎನನ್ನು ಕಲಿಸಿಕೊಡುತ್ತೆವೊ, ಅದನ್ನೆ ಅವರು ಕಲಿತುಕೊಳ್ಳುತ್ತಾರೆ, ಆದರಿಂದ ನಾವು ಅವರಿಗೆ ಒಳ್ಳೆದನ್ನೆ ಕಲಿಸ ಬೇಕು, ಮಾತ್ರವಲ್ಲಾ, ಅದರಂತೆ ಹೆತ್ತವರು ಉತ್ತಮ ಮಾರ್ಗದರ್ಶನದ ಬದುಕನ್ನು ಬದುಕಿ ತೋರಿಸ ಬೇಕು’ ರೋಜರಿ ಇಗರ್ಜಿಯ ಮೈದಾನದಲ್ಲಿ ನೆಡೆದ ರೋಜರಿ ಕಿಂಡರ್ ಗಾರ್ಟನನ ವಾರ್ಷಿಕೋತ್ಸವದಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಿ.ಎಸ್.ಐ. ಚರ್ಚಿನ ಪಾಸ್ಟರ್ ವ|ಕೀಶೊರ್ ಕುಮಾರ್ ಹೆತ್ತವರಿಗೆ ಸಂದೇಶ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷರಾದ ರೋಜರಿ ಇಗರ್ಜಿಯ ಪ್ರಧಾನ ಧರ್ಮಗುರು, ಶಾಲಾ ವ್ಯವಸ್ಥಾಪಕರು ‘ನಾವು ಇಂತಹ ಶಾಲೆಯಲ್ಲಿ ಮಗುವಿನ ಉತ್ತಮ ಭವಿಸ್ಯ ರೂಪಿಸುವಲ್ಲಿ ಶ್ರಮಿಸುತ್ತೆವೆ, ನಮ್ಮಲ್ಲಿನ ಎಲ್ಲಾ ಮಕ್ಕಳು ಪ್ರತಿಭೆಗಳಿಂದ ನಿಮ್ಮ ಮನ ಮನೆ ಬೆಳಗಲೆಂದು ನಮ್ಮ ಹಾರೈಕೆ’ ಎಂದು ಅವರು ನುಡಿದರು.
ಪುಟ್ಟ ಮಕ್ಕಳೆ ಅತಿಥಿಗಳನ್ನು ಸ್ವಾಗತಿಸಿದರು. ಶಾಲಾ ಮುಖ್ಯೊಪಾಧ್ಯಾನಿ ಶೈಲಾ ಲೂವಿಸ್ ವರದಿಯನ್ನು ವಾಚಿಸಿದರು, ಸಂತ ಮೇರಿಸ್ ಪಿ.ಯು.ಕಾಲೇಜಿನ ಪ್ರಾಂಶುಪಾಲ ವ|ಧರ್ಮಗುರು ಪ್ರವೀಣ್ ಅಮ್ರತ್ ಮಾರ್ಟಿಸ್, ಸಹಾಯಕ ಧರ್ಮಗುರು ವ| ಜೆರಾಲ್ಡ್ ಸಂದೀಪ್ ಡಿಮೆಲ್ಲೊ, ಪಾಲನ ಮಂಡಳಿ ಅಧ್ಯಕ್ಷ ಜೇಕಬ್ ಡಿಸೋಜಾ, ರೋಜರಿ ಆಂಗ್ಲ ಮಧ್ಯಾಮಾ ಹೈಸ್ಕೂಲಿನ ಮುಖ್ಯೊಪಾಧ್ಯಾನಿ ಸಿಸ್ಟರ್ ಜೊಯ್ಸ್ಲಿನ್, ಸೈಂಟ್ ಮೇರಿಸ್ ಶಾಲೆಯ ಮುಖ್ಯೊಪಾಧ್ಯಾನಿ ಡೋರಾ ಸುವಾರಿಸ್, ಬಹುಮಾನಗಳನ್ನು ನೀಡಿದರು ಸಣ್ಣ ಮಕ್ಕಳಿಂದ ಡ್ಯಾನ್ಸ್, ನಟನೆ ಮತ್ತು ಯಕ್ಷಗಾನ ಪ್ರದರ್ಶನದಂತಹ ಸಾಂಸ್ಕ್ರತಿಕ ಕಾರ್ಯಕ್ರಮಗಳು ನೆಡೆದವು. ಹತ್ತು ವರ್ಷ ಸೇವೆ ಸಲ್ಲಿಸಿದ ಮೀರಾ ಬಾರೆಟ್ಟೊ ಅವರನ್ನು ಗೌರವಿಸಲಾಯಿತು. ಶಿಕ್ಷಕಿ ಅನ್ನಾ ಡಿಸೋಜಾ ಮತ್ತು ವೀಣಾ ಡಿಸೋಜಾ ಕಾರ್ಯಕ್ರಮವನ್ನು ನಿರುಪಿಸಿದರು.