ಮುಂಬಯಿ, ಮಾ.14: ಪತ್ರಕರ್ತರ ವೇದಿಕೆ ಬೆಂಗಳೂರಿನ ಉಡುಪಿ ಘಟಕ ದಿ| ರಾಜೇಶ ಶಿಬಾಜೆ ಹೆಸರಿನಲ್ಲಿ ವಾರ್ಷಿಕವಾಗಿ ಕೊಡಮಾಡುವ 2017ರ ಸಾಲಿನ ರಾಜೇಶ ಶಿಬಾಜೆ ಮಾಧ್ಯಮ ಪ್ರಶಸ್ತಿಗೆ ಉಡುಪಿಯ ಪತ್ರಕರ್ತ ಸುಭಾಶ್ಚಂದ್ರ ಎಸ್.ವಾಗ್ಲೆ ಮತ್ತು ಮುಂಬಯಿ ಅಲ್ಲಿನ ಹೆಸರಾಂತ ಪತ್ರಕರ್ತ ನವೀನ್ ಕೆ.ಇನ್ನಾ ಆಯ್ಕೆ ಆಗಿದ್ದಾರೆ.
ಮೂಲತಃ ಅವಿಭಜಿತ ದ.ಕ ಜಿಲ್ಲೆಯ ಕಾರ್ಕಳ ತಾಲೂಕು ಮುಂಡ್ಕೂರು ಇನ್ನಬೈಲು ಮನೆ ನಿವಾಸಿ ಆಗಿರುವ ನವೀನ್ ಅವರು ಮುಂಬಯಿಯಿಂದ ಪ್ರಕಟಿತ ಏಕೈಕ ಸಮಗ್ರ ಕನ್ನಡ ದೈನಿಕ ಕರ್ನಾಟಕ ಮಲ್ಲ ಇದರ ಕ್ರೀಡಾ ವಿಭಾಗೀಯ ಅಂಕಣಕಾರÀರಾಗಿ ಅನೇಕ ವರ್ಷಗಳಿಂದ ಕಾರ್ಯನಿರತ ಆಗಿದ್ದಾರೆ. ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯ ಸದಸ್ಯರೂ ಆಗಿರುವ ಇವರು ಥಾಣೆ ಕಲ್ವಾ ಇಲ್ಲಿನ ನಿವಾಸಿ ಆಗಿದ್ದು ಪ್ರಶಸ್ತಿಗೆ ಭಾಜನರಾದ ಸರ್ವರ ಪತ್ರಕರ್ತ ನವೀನ್ ಇನ್ನ ಅವರಿಗೆ ನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆ ಶುಭಾರೈಸಿದೆ.