ಕುಂದಾಪುರ, ಮಾ.30: ಕುಂದಾಪುರದ ಸರಕಾರಿ ಆಸ್ಪತ್ರೆಯ ಆವರಣದಲ್ಲಿ, ಆಸ್ಪತ್ರೆಯ ಗೇಟಿನ ಬಲ ಭಾಗದಲ್ಲಿನಿರ್ಮಿಸಿರುವ ಔಷಧಿ ಅಂಗಡಿಯನ್ನು ಅಸಿಸ್ಟೆಂಟ್ ಕಮಿಶನರ್ ಪುಸ್ಪ ನಾಗ ಇವರು ಜನರ ಅಗತ್ಯವನ್ನು ಮನಗಂಡು ವಿಳಂಬಕ್ಕೆ ದಾರಿ ಕೊಡದೆ ಸರಳವಾಗಿ ಉದ್ಘಾಟನೆ ಮಾಡಿದ್ದಾರೆ. ಮುಂದಿನ ದೀನ ಈ ಪ್ರಧಾನ ಮಂತ್ರಿ ಭಾರತೀಯ ಔಷಧಿ ಕೇಂದ್ರವನ್ನು ವಿದ್ಯುಕ್ತವಾಗಿ ಆರಂಭಿಸಲಾಗುವುದೆಂದು ಅವರು ತಿಳಿಸಿದರು.
ಈ ಸರಳ ಉದ್ಘಾಟನೆಯ ಕಾರ್ಯಕ್ರಮದಲ್ಲಿ, ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ|ಉದಯ್ ಶಂಕರ್, ಕುಂದಾಪುರ ರೆಡ್ ಕ್ರಾಸ್ ಸಂಸ್ಥೆಯ ಚೇಯರ್ ಮೇನ್ ಚಿನ್ಮಯಿ ಆಸ್ಪತ್ರೆಯ ಮುಖ್ಯಸ್ತ ಡಾ|ಉಮೇಶ್ ಪುತ್ರನ್, ಕುಂದಾಪುರ ರೇಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಸೀತಾರಾಮ್ ಶೆಟ್ಟಿ, ಖಚಾಂಚಿ ಶಿವರಾಮ್ ಶೆಟ್ಟಿ, ಮೆಡಿಕಲ್ ಎಡ್ವಾಯ್ಸರ್ ಡಾ|ಎಸ್. ಮಲ್ಲಿ ಮತ್ತು ಸದಸ್ಯರಾದ ಡಾ|ಸೋನಿ ಡಿಕೋಸ್ತಾ, ಗಣೇಶ್ ಆಚಾರ್, ಸದಾನಂದ ಶೆಟ್ಟಿ, ಬಶೀರ್ ಸಾಹೇಬ್ ಇನ್ನಿತರರು ಪಾಲುಗೊಂಡಿದ್ದರು.
ಈ ಜನಔಷಧಿ ಕೇಂದ್ರದಲ್ಲಿ, ನಾಗರಿಕರಿಗೆ ಅಗತ್ಯ ಇರುವ ಔಷಧಿಗಳು ಇಲ್ಲದಿದ್ದರೆ, ನಾಗರಿಕರಿಗೆ ಅಗತ್ಯ ಇರುವ ಎಲ್ಲಾ ಔಷಧಿಗಳನ್ನು ತರಿಸಿಕೊಡಲಾಗುವುದೆಂದು ತಿಳಿಸಿದ್ದಾರೆ. ಇದರ ಲಾಭವನ್ನು ನಾಗರಿಕರು ಪಡೆದುಕೊಳ್ಳ ಬೇಕಾಗಿದೆಯೆಂದು ತಿಳಿಸಲಾಗಿದೆ.