ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಉಪವಿಭಾಧಿಕಾರಿ ಶಿಲ್ಪಾ ನಾಗ್ ಮತ್ತು ಸರಕಾರಿ ಅಧಿಕಾರಿಗಳು ಆಕ್ರಮ ಮರಳುಗಾರಿಕೆ ಅಡ್ಡೆಗಳ ಮೇಲೆ ಕಾರ್ಯಚರಣೆ ನೆಡೆಸಿದಾಗ ಅವರ ಮೇಲೆ ಆಕ್ರಮ ಮರಳುಗಾರಿಕೆಯವರು, ಹಲ್ಲೆ ಮಾಡಿ ಕಾನೂನು ಉಲಂಘಿಸಿದ ಅಕ್ರತ್ಯವನ್ನು ನಾವು ಖಂಡಿಸುತ್ತೇವೆ, ಇದರ ಸೂಕ್ತ ತನಿಕೆ ನೆಡೆಸಿ ತಪ್ಪಿದಸ್ಥರನ್ನು ಕಾನೂನು ಕ್ರಮಕ್ಕೆ ಒಳಪಡಿಸ ಬೇಕೆಂದು ಆಗ್ರಹಿಸುತ್ತೇವೆ- ಜೇಕಬ್ ಡಿಸೋಜಾ – ಕಥೊಲಿಕ್ ಸಭಾ, ಅಧ್ಯಕ್ಷರು ಕುಂದಾಪುರ ವಲಯ ಮತ್ತು ಕುಂದಾಪುರ ಘಟಕ ಮತ್ತು ಸದಸ್ಯರು.
ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಉಪವಿಭಾಧಿಕಾರಿ ಶಿಲ್ಪಾ ನಾಗ್ ಮತ್ತು ಅವರ ಸಿಂಬದಿ ಕೆಚ್ಚೆದೆಯಿಂದ ರಾತ್ರಿ ಹೊತ್ತಲ್ಲಿ ಹೋಗಿ ಕಾರ್ಯಚರಣೆ ಮಾಡಿದ ದಕ್ಷ ಅಧಿಕಾರಿಣಿಗಳನ್ನು ನಾವು ಶ್ಲಾಗಿಸುತ್ತೇವೆ, ಈ ಕಾರ್ಯಚರಣೆ ವೇಳೆ ಇವರು ಮಹಿಳೆರೆಂದು ಗೌರವಿಸದೆ, ಸಂಸ್ಕ್ರತಿಗೆ ಹೆಸರಾದ ನಮ್ಮೂರಿನಲ್ಲಿ, ಶುದ್ದ ಅನಾಗರಿಕರಂತೆ ಇವರ ಮೇಲೆ ಹಲ್ಲೆ ಮಾಡಿದ ಆಕ್ರಮ ಮರಳುಗಾರರ ಈ ದುಷ್ಟ ಕ್ರತ್ಯವನ್ನು ನಾವು ಖಂಡಿಸುತ್ತೇವೆ, ಹಾಗೇ ಶೀಘ್ರವಾಗಿ ಇದರ ತನಿಕೆಯನ್ನು ಮಾಡಿ ತಪ್ಪಿದಸ್ಥರನ್ನು ಶಿಕ್ಷೆಗೆ ಗುರಿ ಪಡಿಸಿ ನ್ಯಾಯ ದೊರಕಿಸ ಬೇಕೆಂದು ವಿನಂತಿಸುತೇವೆ - ವಿನಯಾ ಡಿಕೋಸ್ತಾ, ಅಧ್ಯಕ್ಷೆ ಕುಂದಾಪುರ ಕಥೊಲಿಕ್ ಸ್ತ್ರೀ ಸಂಘ ಮತ್ತು ‘ಕ್ರಪಾ’ ಸ್ತ್ರೀ ಸ್ವಸಹಾಯ ಮಹಾ ಸಂಘಗಳ ಒಕ್ಕೂಟ