ಮುಂಬಯಿ, ಎ.04: ಮುಂಬಯಿ ಮಹಾನಗರದ ಹಿರಿಯ ಉದ್ಯಮಿ, ಮೈಂದ ಕೆ.ಶೆಟ್ಟಿ (91.) ಅವರು ಇಂದಿಲ್ಲಿ (04.04.2017) ಮಂಗಳವಾರ ಮುಂಜಾನೆ ವೃದ್ಧಾಪ್ಯದಿಂದ ಸಯಾನ್ ಪಶ್ಚಿಮದ ಸ್ವನಿವಾಸದಲ್ಲ್ಲಿ ನಿಧನರಾದರು.
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ಬೆಳುವಾಯಿ ಪಡ್ಯಾರ್ ನಿವಾಸಿ ಆಗಿದ್ದ ಮೃತÀರು ಮಹಾನಗರದಲ್ಲಿನ ಹೊಟೇಲುಗಳಿಗೆ ಗಿರಾಣಿ ಸಾಮಾನು ಒದಗಿಸುತ್ತಾ, ಹಿರಿಯ ಹೊಟೇಲು ಉದ್ಯಮಿಯಾಗಿ, ಸಮಾಜ ಸೇವಕರಾಗಿ ಜನಾನುರೆಣಿಸಿದ್ದರು.
ಪತ್ನಿ ವನಜಾ ಕೆ.ಶೆಟ್ಟಿ, ಟೆಂಡರ್ಫ್ರೆಶ್ ಫುಡ್ಸ್ ಎಂಡ್ ಐಸ್ಕ್ರೀಮ್ಸ್ ಪ್ರೈವೇಟ್ ಲಿಮಿಟೆಡ್ ಇದರ ನಿರ್ದೇಶಕ ಪ್ರಭಾಕರ್ ಕೆ.ಶೆಟ್ಟಿ ಸೇರಿದಂತೆ ಇಬ್ಬರು ಸುಪುತ್ರರು, ಓರ್ವ ಸುಪುತ್ರಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.