Thursday 28th, March 2024
canara news

ಪೊಲೀಸರಿಂದ ನಕ್ಸಲ್‌ ಶಿವಕುಮಾರ್‌ ವಿಚಾರಣೆ

Published On : 07 Apr 2017   |  Reported By : Canaranews Network


ಮಂಗಳೂರು: ದ.ಕ.ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರಿನಲ್ಲಿ 4 ವರ್ಷಗಳ ಹಿಂದೆ ನಡೆದ ಬೈಕ್‌ ಹಾಗೂ ಆಮ್ನಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಸ್ಟಡಿಯಲ್ಲಿರುವ ನಕ್ಸಲ್‌ ನಾಯಕ ಶಿವಕುಮಾರ್‌ನನ್ನು ಬುಧವಾರ ಕುತ್ಲೂರಿಗೆ ಕರೆದೊಯ್ಯಲಾಯಿತು.ನಕ್ಸಲ್‌ ರಾಜ್ಯ ನಾಯಕ ರಮೇಶ್‌ ಯಾನೆ ಸಮೀರ್‌ ಯಾನೆ ರಫಿ ಯಾನೆ ಮಾಧವ ಯಾನೆ ಶಿವಕುಮಾರ್‌ ಬಿ.ಎಸ್‌. (52)ನನ್ನು ಕುತ್ಲೂರು ರಾಮಚಂದ್ರ ಭಟ್ಟರ ಮನೆಗೆ ಕರೆದೊಯ್ಯಲಾಯಿತು.

2013ರಲ್ಲಿ ನಾರಾವಿ ಸಮೀಪದ ಕುತ್ಲೂರಿನಲ್ಲಿ ಬೈಕ್‌ ಹಾಗೂ ಆಮ್ನಿಗೆ ಬೆಂಕಿ ಹಚ್ಚಿದ ಪ್ರಕರಣದ ಹೆಚ್ಚಿನ ವಿಚಾರಣೆ ನಡೆಲಾಗುತ್ತಿದೆ. ಪೊಲೀಸ್‌ ವಾಹನದಿಂದ ಕೆಳಗಿಳಿಯಲು ಒಲ್ಲದ ಶಿವಕುಮಾರನನ್ನು ಪೊಲೀಸರು ತನಿಖೆಗಾಗಿ ಇಳಿಯುವಂತೆ ಸೂಚಿಸಿದರು. ಅನಂತರ ವಿಚಾರಣೆ ವೇಳೆ ಕೂಡ ತಾನು ಈ ಕೃತ್ಯದಲ್ಲಿ ನೇರ ಭಾಗಿಯಲ್ಲ, ತಮ್ಮ ಸಂಘಟನೆಯ ಬೇರೆ ಸದಸ್ಯರ ಕೃತ್ಯ ಆಗಿರಬಹುದು ಎಂದು ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here