ಮುಂಬಯಿ, ಎ.10: ಬಿಎಸ್ಕೆಬಿ ಅಸೋಸಿಯೇಶನ್ ಗೋಕುಲ ಸಾಯನ್ ಮುಂಬಯಿ ತನ್ನ ಮುಖಪತ್ರಿಕೆ `ಗೋಕುಲವಾಣಿ'ಗಾಗಿ ಆಯೋಜಿಸಿದ್ದ ಯುಗಾದಿ ಕಥಾ ಸ್ಪರ್ಧೆಗೆ ಕಥೆಗಳ ಫಲಿತಾಂಶ ಪ್ರಕಟಿಸಿದೆ.
ಫಲಿತಾಂಶ ಈ ಕೆಳಗಿನಂತಿವೆ: ಮೊದಲನೇ ಬಹುಮಾನ: ರೂ.7,000/- `ಕತ್ತಲೆಗೆ ಹತ್ತು ತಲೆಯೇ?': ಲೇ:ಗುರುಪ್ರಸಾದ್ ಎ.ಎಚ್., ಎರಡನೇ ಬಹುಮಾನ: ರೂ.5,000/-`ಪಶ್ಚಿಮಾದ್ರಿಯಲಿ' ಲೇ: ವಸಂತಿ ಅಲ್ಲಗಿ ಮೂರನೇ ಬಹುಮಾನ: ರೂ.3,000/- `ಭಾಗ್ಯ' ಲೇ:ಶಾರದಾ ಕೃಷ್ಣಮೂರ್ತಿ ಪೆÇ್ರೀತ್ಸಾಹಕ ಬಹುಮಾನ (ತಲಾ ರೂ.1,000/-) `ಪೂರ್ಣಾಹುತಿ' ಲೇ:ವಿದ್ಯಾಧರ ಮುತಾಲಿಕ ದೇಸಾಯಿ, `ಬೇವು ಬೆಲ್ಲದೊಳಿಡಲೇನು ಫಲ?' ಲೇ: ಬಿ.ಎಸ್ ಶ್ರೀಧರ್.
ಸ್ಪರ್ಧೆಯಲ್ಲಿ ಭಾಗವಹಿಸದ ಎಲ್ಲರಿಗೂ ಕೃತಜ್ಞತೆಗಳು ಹಾಗೂ ಬಹುಮಾನ ವಿಜೇತರಿಗೆ ಅಭಿನಂದನೆಗಳು. ಬಹುಮಾನದ ಮೊತ್ತ ಹಾಗೂ ಪ್ರಮಾಣ ಪತ್ರವನ್ನು ಅಂಚೆ ಮುಖೇನ ಕಳುಹಿಸಲಾಗುವುದು ಎಂದು ಗೋಕುಲವಾಣಿ ಸಂಪಾದಕ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.