ಮಂಗಳೂರು: ವಿವಿಧಕಾರಣ ಮುಂದಿಟ್ಟು ಮೇ 10ರ ಅನಂತರ ಪ್ರತೀ ರವಿವಾರ ಪೆಟ್ರೋಲ್ ಬಂಕ್ ಬಂದ್ ಮಾಡುವ ಕುರಿತು ಪೆಟ್ರೋಲ್ ಬಂಕ್ ಮಾಲಕರ ಸಂಘದ ನಿರ್ಧಾರಕ್ಕೆ ಕರ್ನಾಟಕ ಪೆಟ್ರೋ ಲಿಯಂ ವಿತರಕರ ಮಹಾಮಂಡಳ ಬೆಂಬಲ ವ್ಯಕ್ತಪಡಿಸಿಲ್ಲ.
ಹೀಗಾಗಿ ಮೇ 10ರ ಬಳಿಕ ರವಿವಾರವೂ ರಾಜ್ಯದ ಬಹುತೇಕ ಪೆಟ್ರೋಲ್ ಪಂಪ್ ಗಳು ವಹಿವಾಟು ನಡೆಸಲಿವೆ. ಕಮಿಶನ್ ಹೆಚ್ಚಳಕ್ಕೆ ಆಗ್ರಹ, ಅಧಿಕಾರಿಗಳ ಕಿರುಕುಳಕ್ಕೆ ತಡೆ ಹಾಗೂ ಹೊಸ ಬಂಕ್ಗಳಿಗೆ ಲೈಸೆನ್ಸ್ ನೀಡದಂತೆ ಆಗ್ರಹಿಸಿ ಪ್ರತೀ ರವಿವಾರ ವಹಿವಾಟು ನಡೆಸದಿರಲು ಹರಿಯಾಣದಲ್ಲಿ ನಡೆದ ಪೆಟ್ರೋಲ್ ಬಂಕ್ ಮಾಲಕರ ಸಂಘ ನಿರ್ಧರಿಸಿತ್ತು.