ಮಂಗಳೂರು: ಶಾಲಾ ಮಕ್ಕಳಿಗೆ ಬೇಸಿಗೆ ರಜೆ ಆರಂಭವಾದ ಹಿನ್ನೆಲೆಯಲ್ಲಿ ಡಾ| ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಜೈವಿಕ ಉದ್ಯಾನವನ ಸೋಮವಾರವೂ ತೆರೆದಿರುತ್ತದೆ.ಪ್ರತೀ ಸೋಮವಾರ ಜೈವಿಕ ಉದ್ಯಾನವನ ಮುಚ್ಚಿರುತ್ತದೆ. ಆದರೆ ಮಕ್ಕಳಿಗೆ ಶಾಲಾ ರಜೆ ಹಿನ್ನೆಲೆಯಲ್ಲಿ ಎಪ್ರಿಲ್ 17ರಿಂದ ಮೇ ಕೊನೆವರೆಗೆ ಎಲ್ಲ ಸೋಮವಾರಗಳಂದೂ ಉದ್ಯಾನವನ ತೆರೆದಿರುತ್ತದೆ.
ಬೆಳಗ್ಗೆ 9.30ರಿಂದ ಸಂಜೆ 5 ಗಂಟೆವರೆಗೆ ಉದ್ಯಾನವನ ವೀಕ್ಷಣೆಗೆ ಲಭ್ಯ ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಜಯಪ್ರಕಾಶ್ ಭಂಡಾರಿ ತಿಳಿಸಿದ್ದಾರೆ. ಉಳಿದ ದಿನಗಳಂದು ಎಂದಿನಂತೆಯೇ ಸಾರ್ವಜನಿಕರ ಭೇಟಿಗೆ ಲಭ್ಯವಿರುತ್ತದೆ