ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಉಪ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮತ್ತು ಅವರ ಸಿಂಬದಿ ಕೆಚ್ಚೆದೆಯಿಂದ ರಾತ್ರಿ ಹೊತ್ತಲ್ಲಿ ಕುಂದಾಪುರ ತಾಲೂಕಿನ ಕಂಡ್ಲೂರು ಎಂಬಲ್ಲಿ, ಆಕ್ರಮ ಮರಳುಗಾರಿಕೆ ಮಾಡುವಲ್ಲಿ ಹೋಗಿ ಕಾರ್ಯಚರಣೆ ಮಾಡಿ, ದಿಟ್ಟತನ ಮೆರೆದ ದಕ್ಷ ಅಧಿಕಾರಿಣಿಗಳನ್ನು ಉಡುಪಿ ಪ್ರಾಂತ್ಯ ಮಟ್ಟದ ಕಥೊಲಿಕ್ ಸ್ತ್ರೀ ಸಂಘಟನೆಯು ಅಧಿಕಾರಿಣಿಗಳನ್ನು ಶ್ಲಾಘಿಸುವ ಕಾರ್ಯಕ್ರಮವನ್ನು ನೆಡೆಸಿದರು.
ಉಡುಪಿ ಪ್ರಾಂತ್ಯ ಕಥೊಲಿಕ್ ಸ್ತ್ರೀ ಸಂಘಟನೆಯ ಸಚೇತಕಿ ಮತ್ತು ಅವರ ತಂಡ ಉಡುಪಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿ ಶ್ಲಾಘನ ಪತ್ರವನ್ನು ಹಸ್ತಾತಂರ ಮಾಡಿದರು, ಇದಕ್ಕೆ ಉತ್ತರವಾಗಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸಂತೊಷವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ, ಪ್ರಾಂತ್ಯ ಕಥೊಲಿಕ್ ಸ್ತ್ರೀ ಸಂಘಟನೆಯ ಅಧ್ಯಕ್ಷೆ ಐರಿನ್ ಪಿರೇರಾ, ಉಪಾಧ್ಯಕ್ಷೆ ಬೆನೆಡಿಕ್ಟಾ ಫೆರ್ನಾಂಡಿಸ್, ಕಾರ್ಯದರ್ಶಿ ಸಿಂತಿಯಾ ಡಿಸೋಜಾ ಖಜಾಂಚಿ ಬೀನಾ ಲುವಿಸ್ ಮತ್ತು ಇತರ ಪದಾಧಿಕಾರಿಗಳು ಹಾಜರಿದ್ದರು