Friday 29th, March 2024
canara news

ಮಂಗಳೂರಿನಲ್ಲಿ ನೀರಿಗಾಗಿ ಹಾಹಾಕಾರ: ಎಚ್ಚರ

Published On : 20 Apr 2017   |  Reported By : Canaranews Network


ಮಂಗಳೂರು: ಮಂಗಳೂರಿನೆಲ್ಲೆಡೆ ನೀರಿಗಾಗಿ ಹಾಹಾಕಾರ ಎದ್ದಿದೆ. ಮಂಗಳೂರಿಗರಿಗೆ ಎರಡು- ಮೂರು ದಿನಕ್ಕೊಮ್ಮೆ ನೀರಿ ಪೂರೈಕೆಯಾಗುತ್ತಿದೆ. ಬಾವಿ, ಕೆರೆಗಳಲ್ಲಿ ನೀರು ಬತ್ತಿ ಹೋಗಿದೆ. ಇದ್ದ ಕೆರೆಗಳ ಹೂಳೆತ್ತಿ ಅದರ ನೀರನ್ನು ಉಪಯೋಗಿಸಲಾಗುತ್ತಿದೆ. ಆದರೆ, ಈ ಸಂದರ್ಭದಲ್ಲಿ ವಿಷಾನಿಲ ಸೇವಿಸಿ ಅಮಾಯಕ ಜೀವಗಳು ಬಲಿಯಾದ ದುರ್ಘಟನೆಗಳು ಹಲವಾರು ಇವೆ. ಹೀಗಾಗಿ, ಹೂಳು ತೆಗೆಯಲು ಕೆರೆ-ಬಾವಿಗಳಿಗೆ ಇಳಿಯುವ ಮುನ್ನ ಎಚ್ಚರವಿರಲಿ.ಬೇಸಗೆಯಲ್ಲಿ ನೀರಿಲ್ಲದೇ ಬತ್ತಿದ ಬಾವಿಗಳಲ್ಲಿ ಎಷ್ಟು ಅಡಿ ಆಳಕ್ಕೆ ಹೂಳು ತುಂಬಿರುತ್ತದೆ ಎಂಬುವುದನ್ನು ಊಹಿಸುವುದು ಅಸಾಧ್ಯ. ಕೆಸರಿನ ಮೇಲೆ ಕಸ-ಕಡ್ಡಿ ಮತ್ತು ತರಗೆಲೆ ಬಿದ್ದು ಮುಚ್ಚಿಕೊಂಡಿರುತ್ತದೆ.

ಮಳೆಗಾಲ ಆರಂಭದ ಮೊದಲು ಬಾವಿಗಳ ಕೆಸರು ತೆಗೆದು ಸ್ವಚ್ಛಗೊಳಿಸದಿದ್ದರೆ, ನೀರಿನ ಒರತೆ ಹೆಚ್ಚದು. ಆದರೆ, ಕೆಸರಿನ ಜತೆಗೆ ಕಸ-ಕಡ್ಡಿ ಕೊಳೆತು ರಾಸಾಯನಿಕ ಕ್ರಿಯೆಗೆ ಒಳಗಾಗಿ ವಿಷಾನಿಲ ಸೃಷ್ಟಿಯಾಗಿರುತ್ತದೆ. ಈ ಬಗ್ಗೆ ಜನರಿಗೆ ಸೂಕ್ತ ಅರಿವಿಲ್ಲದ್ದರಿಂದ ಪ್ರತಿವರ್ಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೀವಹಾನಿ ಸಂಭವಿಸಿದ ನಿದರ್ಶನಗಳಿವೆ. ಹೀಗಾಗಿ ಪ್ರತಿಯೊಬ್ಬ ನಾಗರೀಕರು ಈ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here