ಮಂಗಳೂರು : ಮಂಗಳೂರು ಜಂಕ್ಷನ್- ಯಶವಂತಪುರ ರೈಲನ್ನು (ನಂ. 16575/ 16576) ಮಂಗಳೂರು ಸೆಂಟ್ರಲ್ಗೆ ವಿಸ್ತರಿಸುವಂತೆ ಪಾಲಾ^ಟ್ ವಿಭಾಗ ರೈಲ್ವೇ ಬಳಕೆದಾರರ ಸಲಹಾ ಸಮಿತಿ ಸದಸ್ಯ ಹನುಮಂತ ಕಾಮತ್ ಆಗ್ರಹಿಸಿದ್ದಾರೆ. ಬಳಕೆದಾರರ ಸಲಹಾ ಸಮಿತಿ ಸಭೆ ಪಾಲಾ^ಟ್ನಲ್ಲಿ ಎ. 27ರಂದು ಜರಗಲಿದ್ದು, ಈ ವಿಭಾಗದಲ್ಲಿ ಮಂಗಳೂರಿಗೆ ಸಂಬಂಧಿಸಿದ ಪ್ರಮುಖ ರೈಲು ಬೇಡಿಕೆಗಳ ಬಗ್ಗೆ ಚರ್ಚೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪಾಲಾ^ಟ್ ವಿಭಾಗ ರೈಲ್ವೇ ಬಳಕೆದಾರರ ಸಭೆ ಮಹತ್ವ ಪಡೆದುಕೊಂಡಿದೆ.