ಮಂಗಳೂರು: ಮಂಗಳೂರು ಹೊರವಲಯದ ಚಿತ್ರಾಪುರ ಎಂಬಲ್ಲಿನ ಮನೆಯೊಂದಕ್ಕೆ ನುಗ್ಗಿದ ತಂಡವೊಂದು ಮನೆಯವರನ್ನು ಬೆದರಿಸಿ ಚಿನ್ನಾಭರಣ ಹಾಗೂ ಬಟ್ಟೆ ಬರೆ ದರೋಡೆ ಮಾಡಿದ ಘಟನೆ ಶನಿವಾರ ನಸುಕಿನ ಜಾವ ನಡೆದಿದೆ. ಚಿತ್ರಾಪುರ ನಿವಾಸಿ ಅನಿಲ್ ಹೂಗಾರ್ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ.
ನಸುಕಿನ ಜಾವ ಸುಮಾರು ೪ ಗಂಟೆ ಹೊತ್ತಿಗೆ ಕಿಟಕಿಯ ಸರಳುಗಳನ್ನು ಮುರಿದು ಒಳನುಗ್ಗಿದ ೭ರಿಂದ ೮ ಮಂದಿಯ ದರೋಡೆಕೋರರ ತಂಡ ಮನೆ ಮಂದಿಯನ್ನು ಬೆದರಿಸಿ ೭೬ ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದರೋಡೆ ಮಾಡಿದ್ದಾರೆ. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.