ಮಂಗಳೂರು: ಕೆಂಪುದೀಪ ಹಾಗೂ ಕಾರನ್ನು ರಾಜ್ಯ ಸರ್ಕಾರ ಕೊಟ್ಟಿದ್ದು, ಸರ್ಕಾರ ಹೇಳುವವರೆಗೆ ಕಾರಿನಿಂದ ಕೆಂಪು ದೀಪ ತೆಗೆಯುವುದಿಲ್ಲ ಎಂದು ಆಹಾರ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸರ್ಕಾರಿ ಕಾರಿಗೆ ದೀಪ ಹಾಕುವ ಮತ್ತು ತೆಗೆಯುವ ಅಧಿಕಾರ ನಮಗಿಲ್ಲ. ಇಲಾಖೆ ಸೂಚಿಸಿದರೆ ಕೆಂಪು ದೀಪವನ್ನು ತೆಗೆಯುತ್ತೇನೆ. ಅದನ್ನು ನನ್ನ ತಲೆ ಮೇಲೆ ಇಟ್ಟುಕೊಂಡಿಲ್ಲ. ಕೆಂಪು ದೀಪ ತೆಗೆದರೆ ಬಡವರ ಹೊಟ್ಟೆ ತುಂಬುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.