ಮುಂಬಯಿ, ಎ.04: ಮೇ.06: ಜಿಎಸ್ಬಿ ಮಂಡಳ್ ಡೊಂಬಿವಿಲಿ ಸಂಸ್ಥೆಯು ಮೇ.06ನೇ ಶನಿವಾರ ಸಂಜೆ 6.00 ಗಂಟೆಗೆ ಡೊಂಬಿವಿಲಿ ಪೂರ್ವದ ತಿಲಕ್ ರಸ್ತೆಯಲ್ಲಿನ ಸರ್ವೇಶ್ ಸಭಾಗೃಹದಲ್ಲಿ ನಾಡಿನ ಹೆಸರಾಂತ ಗಾಯಕ, ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಪುರಂದರದಾಸ ಪ್ರಸಿದ್ಧಿಯ ಸಂಗೀತಕಾರ ಪುತ್ತೂರು ನರಸಿಂಹ ನಾಯಕ್ ಹರಿದಾಸ ಭಕ್ತಿಸಂಗೀತ ಲಹರಿ ಭಜನಾ ಸಂಧ್ಯಾ ಕಾರ್ಯಕ್ರಮ ಆಯೋಜಿಸಿದೆ.
ಮುಕ್ತ ಪ್ರವೇಶವಿರುವ ಈ ಸಂಗೀತ ಕಾರ್ಯಕ್ರಮದಲ್ಲಿ ನಗರದಲ್ಲಿನ ಎಲ್ಲಾ ತುಳು-ಕನ್ನಡ, ಜಿಎಸ್ಬಿ ಸಂಘ ಸಂಸ್ಥೆಗಳ ಸದಸ್ಯರು, ಸರ್ವ ಸಂಗೀತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಅಸ್ವಾಧಿಸುವಂತೆ ಸಂಘಟಕರು ಈ ಮೀಲಕ ವಿನಂತಿಸಿದ್ದಾರೆ.