ಕುಂದಾಪುರ, ಮೇ.15; ಕುಂದಾಪುರದಲ್ಲಿ ಮಳೆ ಇಲ್ಲದೆ, ಉರಿ ಬಿಸಿಲಿನಿಂದ ಜನ ತತ್ತರಿಸಿ ಹೋಗಿದ್ದರು, ಮೋಡ ಆಗುವುದು ಮತ್ತೆ ಮರೆಯಾಗುವುದು ಹೀಗೆ ನೆಡೆಯುತಿತ್ತು, ಆದರೆ ಇವತ್ತು ಸೋಮವಾರ ಬೆಳಗ್ಗೆ ಕೆಲ ಹೊತ್ತಿನಿಂದ ಗುಡುಗು ಮಿಂಚು ಬರಲಾಂಬಿಸಿತ್ತು, ಇವತ್ತೂ ಗುಡುಗು ಬಂದು ಹೋಹುವುದೆ ವಿನಹ ಮಳೆ ಬರುವ ನಂಬಿಕೆ ಕಳೆಕೊಂಡಿದ್ದು, ಗುಡುಗು ಮಿಂಚು ಮಾತ್ರ ಎಂಬ ಗೊಣಗು ಜನರಲ್ಲಿ ಕೇಳುತಿತ್ತು.
ಆದರೆ ಬೆಳಗ್ಗೆ 8.30 ಕ್ಕೆ ಆರಂಭವಾದ ಮಳೆ 10 ಗಂಟೆಯ ತನಕವು ಗುಡುಗು ಮಿಶ್ರಿತ ಮಳೆ ಬಂದು ನೆಲವನ್ನು, ಗೀಡ ಮರಗಳನ್ನು ತಂಪು ಮಾಡಿ ಬಿಸಿಲಿನ ಜಳ ಕಡಿಮೆ ಮಾಡಿ ಜನರಿಗೆ ಒಂದು ಸಮಾಧಾನದ ಉಸಿರು ಬಿಡುವಂತೆ ಮಾಡಿತು.
ಮಳೆಯ ಸಂದರ್ಭ ಬಹಳ ಶಬ್ದದ ಗುಡುಗು ಮಿಂಚುಗಳಿದ್ದು ಸ್ವಲ್ಪ ಹೊತ್ತು ಭಯದ ವಾತವರಣ ಕುಂದಾಪುರದಲ್ಲಿ ಕಾಣಿಸಿಕೊಂಡಿತು.