Friday 9th, May 2025
canara news

ಸಾಹಿತಿ ವಾಸುದೇವ ಕಾಣೆಮಾರ್ ರಚಿತ ಶ್ಲೋಕಗಳ ಭಾಷಾಂತರ ಕೃತಿ ಬಿಡುಗಡೆ

Published On : 22 May 2017   |  Reported By : Canaranews Network


ಮುಂಬಯಿ, ಮೇ.21: ಕರ್ನಾಟಕ ಸಂಘ ಮುಂಬಯಿ ಇದರ ಸಕ್ರಿಯ ಸದಸ್ಯರೂ, ಕಾನೂನು ತಜ್ಞ ಹಾಗೂ ಸಾಹಿತಿ ವಾಸುದೇವ ಕಾಣೆಮಾರ್ ರಚಿತ `ಶ್ರೀಕೃಷ್ಣ ಗೀತಾ' (ಮೂಲ ಶ್ಲೋಕಗಳ ಭಾಷಾಂತರ ಮತ್ತು ಅನುವಾದ) ಕೃತಿಯನ್ನು ಇಂದಿಲ್ಲಿ ಭಾನುವಾರ ಮಧ್ಯಾಹ್ನ ಮಂಗಳೂರು ಕಾರ್‍ಸ್ಟ್ರೀಟ್ ಅಲ್ಲಿನ ಕಾಣೆಮಾರ್ ಸ್ವಗೃಹದಲ್ಲಿ ಬಿಡುಗಡೆ ಗೊಳಿಸಲ್ಪಟ್ಟಿತು.

ಕೆನಡಾದಲ್ಲಿ ಕೆಮಿಕಲ್ ಇಂಜಿನಿಯರಿಂಗ್ ಪದವೀಧರನಾಗಿ ಪಿಹೆಚ್‍ಡಿ ಪಡೆದ ಡಾ| ವಿ.ವಿಠಲ್ ರಾವ್ ಹಾಗೂ ಪೆÇ್ರ| ಜ್ಯೋತಿ ರಾವ್ ದಂಪತಿ ಪುಸ್ತಕ ಬಿಡುಗಡೆ ಗೊಳಿಸಿ ಶುಭಾರೈಸಿದರು.

ಈ ಸಂದರ್ಭದಲ್ಲಿ ನಾಡಿನ ಹೆಸರಾಂತ ಕ್ಯಾನ್ಸರ್ ತಜ್ಞ ಡಾ| ಕೃಷ್ಣಪ್ರಸಾದ್, ಇಎನ್‍ಟಿ ಸ್ಪೆಷಲಿಸ್ಟ್ ರಾಘವೇಂದ್ರ ಅರೂರ್, ಮಾನಸಿಕ ತಜ್ಞೆ ಡಾ| ಸುಪ್ರಿಯ ಹೆಗ್ಡೆ, ಜನರಲ್ ಫಿಸಿಷಿಯನ್ ಡಾ| ಎಸ್. ಆಚಾರ್, ನರರೋಗ ತಜ್ಞ ಡಾ| ದಿವಾಕರ್ ರಾವ್, ಸರ್ಜನ್ ಡಾ| ದಿನೇಶ್ ರಾವ್, ಜಾನಕಿ ಕಾಣೆಮಾರ್ ಮತ್ತಿತರರು ಉಪಸ್ಥಿತರಿದ್ದರು.

ಗಣೇಶ್ ರಾವ್ ಸ್ವಾಗತಿಸಿ ಪ್ರಸ್ತಾವನೆಗೈದರು. ಶೋಭಾ ಜಿ.ರಾವ್ ಕಾರ್ಯಕ್ರಮ ನಿರ್ವಹಿಸಿದರು. ಸಂತೋಷ್ ಕಾಣೆಮಾರ್ ವಂದಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here