ಉಜಿರೆ,ಮೇ.27: ದಾಭೋಲಿಯ ಸಂಜೀವಿನಿ ಸಮಾಧಿಸ್ಥ ಮಠದ ಪೂರ್ಣಾನಂದ ಸ್ವಾಮೀಜಿ ಅವರ ಶಿಷ್ಯ ದತ್ತಾನಂದ ಸರಸ್ವತಿ ಸ್ವಾಮೀಜಿ ಇಂದಿಲ್ಲಿ ಗುರುವಾರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದರು. ಕ್ಷೇತ್ರದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಶ್ರೀಗಳನ್ನು ಗೌರವಿಸಿದರು. ನಂತರ ದೇವರ ದರ್ಶನ ಪಡೆದ ಸ್ವಾಮೀಜಿ ಧರ್ಮಸ್ಥಳದ ಬಹುಮುಖಿ ಸಮಾಜ ಸೇವಾ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಹೆಗ್ಗಡೆಯವರು ಸ್ವಾಮೀಜಿ ಅವರನ್ನು ಗೌರವಿಸಿದರು.