ಮುಂಬಯಿ, ಜೂ.10: ಶ್ರೀ ರಜಕ ಸಂಘ ಮುಂಬಯಿ (ರಿ.) ಇದರ 80ನೇ ಮಹಾಸಭೆಯನ್ನು ಇಂದು (ಜೂ.11) ಭಾನುವಾರ ಪೂರ್ವಾಹ್ನ 9.30 ಗಂಟೆಗೆ ಸರಿಯಾಗಿ ಕೊಹಿನೂರ್ ಭವನ್ ಹಾಲ್, ಜ್ಞಾನ್ ಜೀವನ್ದಾಸ್ ಮಾರ್ಗ, ದಾದರ್ ಸೆಂಟ್ರಲ್ ರೇಲ್ವೆ ಸ್ಥಾನಕದ ಎದುರುಗಡೆ, ದಾದರ್ (ಪೂರ್ವ), ಮುಂಬಯಿ ಇಲ್ಲಿ ಸಂಘದ ಅಧ್ಯಕ್ಷ ಸತೀಶ್ ಎಸ್ ಸಾಲಿಯಾನ್ ಅಧ್ಯಕ್ಷತೆಯಲ್ಲಿ ಜರಗಲಿರುವುದು.
Satish Salian (Rajaka)
Sumeetra R Palimar (Rajaka)
ಸಭೆಯಲ್ಲಿ 79ನೇ ವಾರ್ಷಿಕ ಮಹಾಸಭೆಯ ವರದಿಯನ್ನು ಓದಿ ಮಂಜೂರು ಮಾಡುವುದು. 2016-17 ರ ವಾರ್ಷಿಕ ವರದಿ ಮತ್ತು ಲೆಕ್ಕಪತ್ರ ಮಂಡಿಸಿ ಮಂಜೂರತಿ, 2017-18ರ ವರ್ಷಕ್ಕೆ ಶಾಸನಬಧ್ಧ ಮತ್ತು ಆಂತರಿಕ ಲೆಕ್ಕ ಪರಿಶೋಧಕರ ಆಯ್ಕೆ, ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾಥಿರ್üಗಳಿಗೆ ಬಹುಮಾನ ವಿತರಣೆ, ಸ್ವರ್ಣ ದಂಪತಿಗಳ ಮತ್ತು ಸಾಧಕರ ಸನ್ಮಾನ, ಮುಂದಿನ ವರ್ಷಾಚರಣೆಗಳ ಪಕ್ಷಿನೋಟ, ಅಧ್ಯಕ್ಷರ ಅನುಮತಿಯ ಮೇರೆಗೆ ಇನ್ನಿತರ ವಿಷಯಗಳ ಬಗ್ಗೆ ಚರ್ಚಿಸಲಾಗುವುದು.
ಆದುದರಿಂದ ಸಂಘದ ರಜಕ ಬಾಂಧವರು, ಸದಸ್ಯರು ಹೆಚ್ಚಿನ ಸ0ಖ್ಯೆಯಲ್ಲಿ ಸಮಯಕ್ಕೆ ಸರಿಯಾಗಿ ಹಾಜರಿರಬೇಕಾಗಿ ಗೌರವ ಕಾರ್ಯದರ್ಶಿ ಸುಮಿತ್ರಾ ಆರ್ ಪಲಿಮಾರ್ ಆಡಳಿತ ಸಮಿತಿ ಪರವಾಗಿ ಈ ಮೂಲಕ ವಿನ0ತಿಸಿದ್ದಾರೆ.