ಮಂಗಳೂರು: ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಬಂಟ್ವಾಳ ಪೊಲೀಸ್ ನಗರ ಠಾಣೆಗೆ ಭೇಟಿ ನೀಡಿ ತಾಲೂಕಿನಲ್ಲಿ ನಡೆದ ಘಟನೆ ಬಗ್ಗೆ ಮಾಹಿತಿ ಪಡೆದರು,
ನಂತರ ತಾಲೂಕಿನ ಅತಿಸೂಕ್ಷ್ಮ ಪ್ರದೇಶಗಳಾದ ಮಾರಿಪಳ್ಳ, ಫರಂಗಿಪೇಟೆ, ಬಿ.ಸಿ.ರೋಡ್, ಕೈಕಂಬ, ಶಾಂತಿ ಅಂಗಡಿ ಮತ್ತಿತರ ಪ್ರದೇಶಗಳನ್ನು ಸಾರ್ವಜನಿಕರೊಂದಿಗೆ ಖುದ್ದು ಪರಿಶೀಲನೆ ನಡೆಸಿದರು. ಸ್ಥಳೀಯ ಯುವಕರನ್ನು ಕರೆದು ಪ್ರಾದೇಶಿಕ ಬೆಳವಣಿಗೆಯ ಬಗ್ಗೆ ಆತ್ಮೀಯತೆಯಲ್ಲಿ ಮಾತನಾಡಿ ಅಣ್ಣಾಮಲೈ ವಿಷಯ ಕಲೆ ಹಾಕಿದರು. ಎಸ್ ಡಿಪಿಐ ಸ್ಥಳೀಯ ಸಮಿತಿ ಅಧ್ಯಕ್ಷ ಅಶ್ರಫ್ ಕೊಲೆ ಪ್ರಕರಣವನ್ನು ಅವಲೋಕಿಸಿದ ಅವರು ಬಳಿಕ ಪರಿಸ್ಥಿತಿ ನಿಯಂತ್ರಿಸುವಂತೆ ತಮ್ಮ ತಂಡದ ಸದಸ್ಯರಿಗೆ ನಿರ್ದೇಶನ ನೀಡಿದರು.