Monday 7th, July 2025
canara news

ಬಂಟ್ವಾಳ ಎಸ್ಡಿಪಿಐ ಮುಖಂಡನ ಹತ್ಯೆ : ಪ್ರಮುಖ ಆರೋಪಿ ಭರತ್ ಸೆರೆ

Published On : 01 Jul 2017   |  Reported By : Canaranews Network


ಮಂಗಳೂರು: ಎಸ್ಡಿಪಿಐ ಅಮ್ಮುಂಜೆ ವಲಯ ಅಧ್ಯಕ್ಷ ಮಹಮ್ಮದ್ ಅಶ್ರಫ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಭರತ್ ಕುಮ್ಡೇಲ್ನನ್ನು ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ 6 ಮಂದಿ ಆರೋಪಿಗಳನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ದರು.

ಇದೀಗ ಬಂಧನಕ್ಕೊಳಗಾಗಿರುವ ಆರೋಪಿ ಭರತ್ ಭಜರಂಗದಳದ ಪುತ್ತೂರು ವಲಯದ ಸಂಚಾಲಕನಾಗಿದ್ದ. ನಿಷೇಧಾಜ್ಞೆ ಇದ್ದ ವೇಳೆಯಲ್ಲೆ ಹತ್ಯೆ ನಡೆದು ವಾತಾವರಣ ಇನ್ನಷ್ಟು ಉದ್ವಿಗ್ನ ಗೊಂಡಿತ್ತು. ಜುಲೈ 2 ರ ವರಗೆ ಬಂಟ್ವಾಳ ಸೇರಿದಂತೆ ಜಿಲ್ಲೆಯ 4 ತಾಲೂಕುಗಳಲ್ಲಿ ನಿಷೇಧಾಜ್ಞೆ ಮುಂದುವರೆದಿದೆ. ಕಲಾಯಿ ನಿವಾಸಿಯಾಗಿದ್ದ ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿದ್ದ ಅಶ್ರಫ್ರರನ್ನು ದುಷ್ಕರ್ಮಿಗಳು ಬೆಂಜನಪದವು ಕರಾವಳಿ ಸೈಟ್ ರಾಮನಗರ ಸಮೀಪ ಜೂನ್ 21 ರಂದು ಹಾಡಹಗಲೆ ತಲವಾರಿನಿಂದ ಕಡಿದು ಹತ್ಯೆಗೈದಿದ್ದರು.ಈ ಘಟನೆಯಿಂದ ದ.ಕ.ಜಿಲ್ಲೆಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here