Saturday 10th, May 2025
canara news

ವಡೇರಹೋಬಳಿ ಪ್ರೌಢಶಾಲೆ ಶುದ್ಧ ನೀರಿನ ವ್ಯವಸ್ಥೆ ಉದ್ಘಾಟನೆ

Published On : 17 Jul 2017   |  Reported By : Bernard J Costa


ಕುಂದಾಪುರದ ವಡೇರಹೋಬಳಿ ಪಿ.ವಿ.ಎಸ್.ಸರೋಜಿನಿ ಮಧುಸೂಧನ ಡಿ ಕುಶೆ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಸ್ಥಾಪಿಸಲಾದ ಶುದ್ಧನೀರಿನ ವ್ಯವಸ್ಥೆಯನ್ನು ಉದ್ಯಮಿ ಪ್ರಕಾಶ್ ಕಾಮತ್ ಉದ್ಘಾಟಿಸಿದರು.

ತನ್ನ ತಾಯಿ ದಿ.ಗೌರಮ್ಮ ಕಾಮತ್ ಅವರ ಸ್ಮರಣಾರ್ಥ ರೂ.30 ಸಾವಿರ ರೂ. ವೆಚ್ಚದಲ್ಲಿ ದಾನಿ ಪ್ರಕಾಶ್ ಕಾಮತ್ ಶುದ್ಧ ನೀರಿನ ಘಟಕವನ್ನು ಪ್ರೌಢಶಾಲೆಗೆ ಹಸ್ತಾಂತರಿಸಿದರು.

ಪ್ರೌಢಶಾಲಾ ಮುಖ್ಯೋಪಾಧ್ಯಾಯ ಚಂದ್ರಶೇಖರ ಶೆಟ್ಟಿ ಈ ಕೊಡುಗೆ ನೀಡಿದ ಪ್ರಕಾಶ್ ಕಾಮತ್‍ರನ್ನು ಅಭಿನಂದಿಸಿದರು.

ಪುರಸಭಾ ಸದಸ್ಯ ವಿಠಲ ಕುಂದರ್ ಉಪಸ್ಥಿತರಿದ್ದರು. ಶಿಕ್ಷಕಿ ನಾಗರತ್ನ ಶೇಟ್ ಸ್ವಾಗತಿಸಿದರು. ಶಿಕ್ಷಕ ನಾರಾಯಣ ಶೆಟ್ಟಿ ನಿರೂಪಿಸಿದರು. ಚೆನ್ನಯ್ಯ ವಂದಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here