Friday 4th, July 2025
canara news

ನಿರಾಶ್ರಿತರಿಗೆ ದಾರಿ ನೀಡುವ ಕೆಲಸ ನಮ್ಮಿಂದಾಗಬೇಕು : ಶಾಸಕ ಮೊಹಿದಿನ್ ಬಾವಾ

Published On : 10 Aug 2017   |  Reported By : Rons Bantwal


ಮುಂಬಯಿ, ಆ.10: ಮಹಿಳೆ ನಿರಾಶ್ರಿತರಿಗೆ ಸಂತ್ರಸ್ತರಿಗೆ ದಾರಿ ನೀಡುವ ಕೆಲಸ ನಮ್ಮಿಂದಾಗಬೇಕು. ಮಹಿಳಾ ಜಾಗೃತ ಸಂಘ ಕಲ್ಪ ಟ್ರಸ್ಟ್ ನ ಸಮಾಜಮುಖಿ ಚಿಂತನೆ ಮೆಚ್ಚುವಂತಹದ್ದು ಒಬ್ಬ ಮಹಿಳೆ ಮುಂದೆ ಬಂದ್ರೆ ಸಮಾಜ ಅಭಿವೃದ್ಧಿ ಆಗಲಿಕ್ಕೆ ಸಾಧ್ಯವಿದೆ ಎಂದÀು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಮೊಹಿದಿನ್ ಬಾವಾ ನುಡಿದರು.

ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾವೂರು, ಮಹಿಳಾ ಜಾಗೃತ ಸಂಘ , ರೇಂಜರ್ಸ್ ಘಟಕ ಹಾಗೂ ಕಲ್ಪ ಟ್ರಸ್ಟ್‍ನ ಸಹಯೋಗದೊ0ದಿಗೆ ಸುರತ್ಕಲ್‍ನ ಶಾಸಕರ ಕಚೇರಿಯಲ್ಲಿ ನಡೆದ ಸ್ವ ಉದ್ಯೋಗಕ್ಕೆ ಸಹಕಾರ ನೀಡುವ ಕಾರ್ಯಕ್ರಮ ಹಾಗೂ ಬಡವರಿಗೆ ಸಾಲ ಸೌಲಭ್ಯ ನೀಡುವ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಾಸಕ ಬಾವಾ ಮಾತನಾಡಿದರು
ಅನೇಕ ಸಮಾಜಮುಖಿ ಕೆಲಸ ಮಾಡಿರುವ ಬ್ಯಾಂಕ್ ಪ್ರಬಂಧಕ ರವಿಚಂದ್ರ ಅವರಿಗೆ ಸನ್ಮಾನಿಸಲಾಯಿತು. ಅಲ್ಲದೆ ಸಂತ್ರಸ್ತೆ ಮಹಿಳೆ ಸೌಮ್ಯ ರವರಿಗೆ ಟೈಲರಿಂಗ್ ಯಂತ್ರ ವಿತರಿಸಲಾಯಿತು.

ವೇದಿಕೆಯಲ್ಲಿ ಕಾವೂರು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ| ಎಸ್.ತಾರಾ , ಕಂದಾಯ ಅಧಿಕಾರಿ ಎಸ್.ನವೀನ್, ಕೆ.ಹರ್ಷ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕಿ ಪ್ರಮೀಳಾ ರಾವ್ ಸ್ವಾಗತಿಸಿದರು. ವಿದ್ಯಾಥಿರ್üನಿ ಕು| ಅಪೂರ್ವ ಕಾರ್ಯಕ್ರಮ ನಿರೂಪಿಸಿದ್ದು, ನಾಗರತ್ನ ವಂದಿಸಿದರು.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here