Saturday 10th, May 2025
canara news

ಮತ್ತೆ ವಿವಾದ ಹುಟ್ಟುಹಾಕಿದ ದ.ಕ. ಉಸ್ತುವಾರಿ ಸಚಿ

Published On : 26 Sep 2017   |  Reported By : canaranews network


ಮಂಗಳೂರು: ವಾಗ್ಮಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಕೀಳುಭಾಷೆಯಲ್ಲಿ ಮಾತನಾಡಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಮಂಗಳೂರು ಹೊರವಲಯದ ಅಸೈಗೋಳಿಯಲ್ಲಿ ನಡೆದ ಉಳ್ಳಾಲ ಮತ್ತು ಮುಡಿಪು ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಸ್ವಾತಂತ್ರ್ಯಹೋರಾಟದಲ್ಲಿ ನೆಹರೂ ಪಾತ್ರದ ಬಗ್ಗೆ ಉಲ್ಲೇಖೀಸುತ್ತ ಅವರು ಮಾತನಾಡುತ್ತಿದ್ದರು.

'ಸ್ವಾತಂತ್ರ್ಯ ಬರಬೇಕೆಂದು ನೆಹರೂ ಜೈಲಿನಲ್ಲಿ ಕುಳಿತಿದ್ದರು. ಅಂತಹ ನೆಹರೂ ಅವರನ್ನು ಚಕ್ರವರ್ತಿ ಸೂಲಿಬೆಲೆ ಎನ್ನುವ ವ್ಯಕ್ತಿ ಎನ್ನುತ್ತ ಕೀಳುಭಾಷೆ ಪ್ರಯೋಗಿಸಿದ್ದಾರೆ. ಬಳಿಕ ವೇದಿಕೆಯಲ್ಲಿ ಆಸೀನರಾಗಿರುವ ಇತರರ ಬಳಿ ತಿರುಗಿ ನೋಡುವ ದೃಶ್ಯ ವೀಡಿಯೋದಲ್ಲಿದೆ. ಅದಕ್ಕೆ ಕಾರ್ಯಕರ್ತರೂ ದನಿಗೂಡಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.ಇದು ವಿವಾದಕ್ಕೆ ಕಾರಣವಾಗಿದೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here