(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಅ.11: ಅಂಧೇರಿ ಪಶ್ಚಿಮದ ಇರ್ಲಾ ಇಲ್ಲಿನ ಶ್ರೀ ಅದಮಾರು ಮಠದ ಮುಂಬಯಿ ಶಾಖೆಯಲ್ಲಿ ತ್ರಿದಿನವಧಿ ವಾಸ್ತವ್ಯಕ್ಕಾಗಿ ಇಂದಿಲ್ಲಿ ಗುರುವಾರ ಮುಂಜಾನೆ ಉಡುಪಿ ಪರ್ಯಾಯ ಪೂರ್ವಭಾವೀ ಸಂಚಾರ ನಿಮಿತ್ತ ಮುಂಬಯಿನಲ್ಲಿರುವ ಶ್ರೀ ಪಲಿಮಾರು ಮಠಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಆಗಮಿಸಿದರು. ಅದಮಾರು ಮಠ ಮುಂಬಯಿ ಶಾಖಾ ದಿವಾನ ಲಕ್ಷಿ ್ಮೀನಾರಾಯಣ ಮುಚ್ಚಿತ್ತಾಯ ಮತ್ತು ಲಕ್ಷಿ ್ಮೀ ಎಲ್. ಮುಚ್ಚಿತ್ತಾಯ ಹಾಗೂ ಮಠದ ವ್ಯವಸ್ಥಾಪಕ ಪಡುಬಿದ್ರಿ ವಿ.ರಾಜೇಶ್ ಮತ್ತು ವಾಣಿ ಆರ್.ರಾವ್ ದಂಪತಿಗಳು ಶ್ರೀಗಳಿಗೆ ಧಾರ್ಮಿಕ ಮತ್ತು ಸಾಂಪ್ರದಾಯಿಕ ಶ್ರದ್ಧೆಯಿಂದ ಬರಮಾಡಿ ಕೊಂಡÀು ಶ್ರೀ ಅದಮಾರು ಮಠದ ವತಿಯಿಂದ ಪಾದಪೂಜೆಗೈದರು. ಮಧ್ಯಾಹ್ನ ಪಟ್ಟದ ಶ್ರೀರಾಮಚಂದ್ರ ದೇವರ ಮಹಾಪೂಜೆ ನೆರವೇರಿಸಿದ ಬಳಿಕ ಶ್ರೀಪಾದರ ಪಾದಪೂಜೆ ನಡೆಸಲಾಗಿದ್ದು, ವಿದ್ವಾನ್ ಕುತ್ಯಾರು ಗಿರೀಶ ಉಪಾಧ್ಯಾಯ ಅವರು ಪೂಜೆ ನೆರವೇರಿಸಿದರು. ಶ್ರೀ ವಿದ್ಯಾಧೀಶ ತೀರ್ಥರು ಸಂಜೆ ಭಾಗವತ ಪ್ರವಚನ ನಡೆಸಿ ಭಕ್ತರನ್ನು ಅನುಗ್ರಹಿಸಿದರು.
ಈ ಸಂದರ್ಭದಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ (ಪೇಜಾವರ ಮಠ)ದ ಕಾರ್ಯನಿರತ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು, ವಿಜಯಲಕ್ಷಿ ್ಮೀ ಎಸ್.ರಾವ್, ಮದ್ಭಾರತ ಮಂಡಳಿಯ ಜಗನ್ನಾಥ ಪುತ್ರನ್, ಜಗನ್ನಾಥ ಕಾಂಚನ್, ಸುಧೀರ್ ಆರ್.ಎಲ್ ಭಟ್, ವಿದ್ವಾನ್ ವಾಸುದೇವ ಉಡುಪ, ಶ್ರೀಕರ ಭಟ್ ಎಲ್ಲಾರೆ, ಗುರುರಾಜ ಉಆಧ್ಯಾಯ ವಿೂರಾರೋಡ್, ಮಾಳ ಶ್ರೀನಿವಾಸ ಭಟ್, ಗೋಪಾಲ ಭಟ್, ಗುರುರಾಜ್ ಭಟ್, ಎಸ್.ಎನ್ ಉಡುಪ, ಗೋಪಾಲ ಶೆಟ್ಟಿ (ರಾಮಕೃಷ್ಣ), ನಿರ್ಮಲಾ ಶಿವತ್ತಾಯ, ಮಾ| ಶ್ರೀಷ ಆರ್.ರಾವ್ ಮತ್ತಿತರ ಗಣ್ಯರು ಪ್ರಮುಖರಾಗಿ ಉಪಸ್ಥಿತರಿದ್ದರು.
ಇಂದಿನಿಂದ ಬರುವ (ಅ.14) ಶನಿವಾರ ತನಕ ಪಲಿಮಾರುಶ್ರೀಗಳು ಅಂಧೇರಿ ಪಶ್ಚಿಮದ ಎಸ್.ವಿ.ರೋಡ್ನ ಇರ್ಲಾ ಇಲ್ಲಿನ ಉಡುಪಿ ಶ್ರೀ ಅದಮಾರು ಮಠ ಮುಂಬಯಿ ಶಾಖೆಯಲ್ಲಿ ಮೊಕ್ಕಂ ಹೂಡಲಿದ್ದು ಆ ನಿಮಿತ್ತ ದಿನಾ ಬೆಳಿಗ್ಗೆ ಶ್ರೀಪಾದರ ಪಾದಪೂಜೆ, ಮಧ್ಯಾಹ್ನ ಪಟ್ಟದ ಶ್ರೀರಾಮಚಂದ್ರ ದೇವರ ಮಹಾಪೂಜೆ, ತೀರ್ಥಪ್ರಸಾದ, ಅನ್ನಸಂತರ್ಪಣೆ, ಸಂಜೆ ಭಾಗವತ ಪ್ರವಚನ, ರಾತ್ರಿಪೂಜೆ ನಡೆಸುವರು. ಆದ್ದರಿಂದ ಭಕ್ತರು ಆಗಮಿಸಿ ಶ್ರೀಪಾದರಿಂದ ಮಂತ್ರಾಕ್ಷತೆ ಸ್ವೀಕರಿಸಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗುವಂತೆ ಪ್ರಬಂಧಕ ಪಡುಬಿದ್ರಿ ರಾಜೇಶ್ ರಾವ್ ತಿಳಿಸಿದ್ದಾರೆ.