Saturday 10th, May 2025
canara news

ಮದೀನ ಮಸೀದಿಯ ವಿದ್ಯಾರ್ಥಿಗಳ ಜೊತೆ ಧರ್ಮಗುರುಗಳ ಸಹಾಯಕ ಪರಾರಿಗೆ ವಿಫಲ ಯತ್ನ

Published On : 04 Nov 2017   |  Reported By : Canaranews network


ಮಂಗಳೂರು: ಕಾರ್ಕಳದ ಮದೀನ ಮಸೀದಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಧರ್ಮಗುರು ಸಹಾಯಕ ಪರಾರಿಯಾಗಿ ಬಳಿಕ ಕುಮಟಾ ರೈಲ್ವೇ ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ಶುಕ್ರವಾರ ನಡೆದಿದೆ. .ಧರ್ಮಗುರುಗಳ ಸಹಾಯಕ ಬಿಹಾರ ಮೂಲದ ತೈಯ್ಯಬ್ ಪರಾರಿಗೆ ಯತ್ನಿಸಿದ ಧರ್ಮಗುರು. ಮದೀನ ಮಸೀದಿಯಲ್ಲಿ ಒಟ್ಟು 32 ವಿದ್ಯಾರ್ಥಿಗಳಿದ್ದು, ಮಕ್ಕಳೊಂದಿಗೆ ಪರಾರಿಯಾಗಲು ಯತ್ನಿಸಿದ್ದ .ಬಿಹಾರದಿಂದ ಧಾರ್ಮಿಕ ಶಿಕ್ಷಣಕ್ಕೆಂದು ಕಾರ್ಕಳದ ಮದೀನ ಮಸೀದಿಗೆ ಈ ಮಕ್ಕಳು ಬಂದಿದ್ದರು.

ಗುರುವಾರ ತಡರಾತ್ರಿಯಿಂದ ಮಕ್ಕಳ ಜೊತೆಗೆ ಧರ್ಮಗುರು ನಾಪತ್ತೆಯಾಗಿರುವುದು ತಿಳಿದುಬಂದಿತ್ತು. ಮಕ್ಕಳು ಹಾಗೂ ಧರ್ಮಗುರುಗಳ ಸಹಾಯಕ ನಾಪತ್ತೆಯಾಗಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರಿಂದ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ ತೈಯ್ಯಬ್ ರೈಲಿನಲ್ಲಿ ಹೊರಟಿರುವ ಬಗ್ಗೆ ಮಾಹಿತಿ ಕಲೆ ಹಾಕಿ ವಶಕ್ಕೆ ಪಡೆದಿದ್ದಾರೆ. ಪೊಲೀಸರು ತೈಯ್ಯಬ್ ನನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here