ಮುಂಬಯಿ, ನ.16: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಗುರುಪುರ ಇಲ್ಲಿನ ಉಳಾಯಿಬೆಟ್ಟು ಗ್ರಾಮದ ಪೆರ್ಮಂಕಿಗುತ್ತು ಮನೆತನದ ತಿಮ್ಮಪ್ಪ ಚಿನ್ನಯ ಪಕ್ಕಳ (81.) ಇವರು ಇಂದಿಲ್ಲಿ ಗುರುವಾರ ಸಂಜೆ ವೃದ್ಧಾಪ್ಯ ಹಾಗೂ ಹೃದಯಾಘಾತದಿಂದ ನಿಧನರಾದರು.
ಪೆರ್ಮಂಕಿಗುತ್ತು ಪಾಲಿಕಟ್ಟೆ ವೈದ್ಯನಾಥ ದೈವಸ್ಥಾನದ ಆಡಳಿತ ಮೋಕ್ತೆಸರರಾಗಿ ಸೇವೆ ಸಲ್ಲಿಸಿದ್ದರು. ಕೃಷಿಕ ಮತ್ತು ಸಮಾಜ ಸೇವಕರಾಗಿ ಜನಾನುರೆಣಿಸಿದ್ದ ಮೃತರು ಪತ್ನಿ, ನಾಲ್ಕು ಸಹೋದರರು, ಮುಂಬಯಿಯಲ್ಲಿನ ಹೆಸರಾಂತ ಯುವ ಹೊಟೇಲು ಉದ್ಯಮಿ ಅಶೋಕ್ ಪಕ್ಕಳ ಸೇರಿದಂತೆ ಐದು ಗಂಡು, ನಾಲ್ಕು ಹೆಣ್ಣು ಮಕ್ಕಳÀು, ಬಂಧು-ಬಳಗವನ್ನು ಅಗಲಿದ್ದಾರೆ.