ಮುಂಬಯಿ, ನ.21: ಭಾರತೀಯ ಜನತಾ ಪಕ್ಷ (ಬಿಜೆಪಿ) ಇದರ ದಕ್ಷಿಣ ಭಾರತೀಯ ಮುಂಬಯಿ ಘಟಕದ ಕಾರ್ಯದರ್ಶಿ ಆಗಿ ಗಣೇಶ ಎ.ಶೆಟ್ಟಿ ಆಯ್ಕೆ ಆಗಿದ್ದಾರೆ.
ಮುರ್ಡೇಶ್ವರ ಮೂಲತಃ ಅಂತಯ್ಯ ಶೆಟ್ಟಿ ಮತ್ತು ಸಾಧಮ್ಮ ಶೆಟ್ಟಿ ದಂಪತಿ ಸುಪುತ್ರರಾದ ಗಣೇಶ ಶೆಟ್ಟಿ ತನ್ನ ಪ್ರಾಥಮಿಕ ಶಿಕ್ಷಣವನ್ನು ಮುರ್ಡೇಶ್ವರ ಇಲ್ಲಿ ಮತ್ತು ಕಾಲೇಜು ವಿದ್ಯಾಭ್ಯಾಸವನ್ನು ಧಾರವಾಡದಲ್ಲಿ ಪೂರೈಸಿದ್ದಾರೆ.
ಹಲವಾರು ವರ್ಷಗಳಿಂದ ಹಿಂದೂಪರ ಹೋರಾಟ ನಡೆಸುತ್ತಿರುವ ಗಣೇಶ್, ಆರ್ಎಸ್ಎಸ್ ಇತ್ಯಾದಿ ಹಿಂದೂ ಸಂಘಟನೆಯಲ್ಲಿ ಶ್ರಮಿಸಿರುತ್ತಾರೆ. ಅವರು ಇತ್ತೀಚೆಗೆ ರಾಜ್ಯದ ಬಿಜೆಪಿ ಕಚೇರಿ ನಡೆಸಲಾದ ಬಿಜೆಪಿ ಸಮಿತಿ ಕಾರ್ಯಕ್ರಮದಲ್ಲಿ ರಾಜ್ಯ ಅಧ್ಯಕ್ಷ ರಾವ್ಸಾಹೇಬ್ ಪಾಟೇಲ್ ದನ್ವಿ, ಸಚಿವ ದಿಲೀಪ್ ಕಾಬ್ಳೆ ಉಪಸ್ಥಿತಿಯಲ್ಲಿ ಅಧಿಕಾರವನ್ನು ಸ್ವೀಕರಿಸಿದರು.