Saturday 10th, May 2025
canara news

೨ ಕೊಲೆ ಪ್ರಕರಣ : ಬಂಧಿತರ ಸಂಖ್ಯೆ 12ಕ್ಕೆ

Published On : 28 Nov 2017   |  Reported By : canaranews network


ಮಂಗಳೂರು: ಮಂಗಳೂರು ಹೊರವಲಯದ ಪರಂಗಿಪೇಟೆಯಲ್ಲಿ ನಡೆದ ಎರಡು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಮತ್ತೊರ್ವ ಆರೋಪಿಯನ್ನು ಸೋಮವಾರ ಮಂಗಳೂರು ಡಿಸಿಐಬಿ ತಂಡ ಬಂಧಿಸಿದೆ.

ಆರೋಪಿಯನ್ನು ಅಡ್ಯಾರ್ ನಿವಾಸಿ ಇಮ್ರಾನ್ ಯಾನೆ ಪಲ್ಟಿ ಇಮ್ರಾನ್ ಎಂದು ಗುರುತಿಸಲಾಗಿದೆ.ಇದೀಗ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 12 ಕ್ಕೇರಿದೆ.ಮಂಗಳೂರಿನ ತೊಕ್ಕೊಟ್ಡಿನಲ್ಲಿ ಡಿಸಿಐಬಿ ಇನ್ಸ್ ಪೆಕ್ಟರ್ ಅಮಾನುಲ್ಲಾ ಮತ್ತವರ ತಂಡ ಕಾರ್ಯಾಚರಣೆ ನಡೆಸಿ ಇಮ್ರಾನ್ ನನ್ನು ಬಂಧಿಸಿದ್ದು, ಈತನನ್ನು ಬಂಟ್ವಾಳ ಎ ಎಸ್ ಪಿ ಡಾ.ಅರುಣ್ ಅವರಿಗೆ ಮುಂದಿನ ತನಿಖೆಗಾಗಿ ಹಸ್ತಾಂತರಿಸಿದ್ದಾರೆ.

ಇತ್ತೀಚೆಗೆ ಪರಂಗಿಪೇಟೆಯಲ್ಲಿ ಅಡ್ಯಾರ್ ಮತ್ತು ಕಣ್ಣೂರಿನ ತಂಡ ಎರಡು ವಾಹನದಲ್ಲಿ ಅಗಮಿಸಿ ನಡೆಸಿದ ಗ್ಯಾಂಗ್ ವಾರ್ ಪ್ರಕರಣದಲ್ಲಿ ಜಿಯಾ ಮತ್ತು ಫಯಾಜ್ ಎಂಬವರಿಬ್ಬರು ಕೊಲೆಗೀಡಾಗಿದ್ದರು. ಹಾಗೆಯೇ ಅನಿಶ್, ಪೈಜಲ್ ಮತ್ತು ಮುಸ್ತಾಕ ಎಂಬವರು ಗಂಭೀರ ಗಾಯಗೊಂಡಿದ್ದರು. ಘಟನೆಗೆ ಹಳೆಯ ದ್ವೇಷ ಕಾರಣವಾಗಿತ್ತು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here